Advertisement

ಕುಂದಾಪುರ:ಕೊನೆಗೂ ಬಂತು ತಾ.ಪಂ. ಅನುದಾನದ ಕಂತು

11:52 PM May 27, 2022 | Team Udayavani |

ಕುಂದಾಪುರ: ಕುಂದಾಪುರ ತಾ.ಪಂ. ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಿಗೆ ಎರಡು ವರ್ಷಗಳಿಂದ ಅನುದಾನ ಬಿಡುಗಡೆ ಯಾಗದ ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ. ಪೂರ್ಣಗೊಂಡ 13 ಕಾಮಗಾರಿಗಳ 47.69 ಲಕ್ಷ ರೂ. ಬಿಡುಗಡೆಯಾಗಿದೆ.

Advertisement

ರಾಜ್ಯದ ಉಳಿದೆಲ್ಲ ತಾ.ಪಂ.ಗಳಿಗೆ ಹಣ ಬಂದರೂ ಕುಂದಾ ಪುರ ಮಾತ್ರ ಬಾಕಿಯಾಗಿತ್ತು. 15ನೇಹಣಕಾಸು ಯೋಜನೆಯಡಿ 2020-21 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಗೆ 8 ಕೋ.ರೂ., ದ.ಕ. ಜಿಲ್ಲೆಗೆ 10 ಕೋ.ರೂ. ಬಿಡುಗಡೆ ಯಾಗಿತ್ತು. 2020ರ ಜೂ. 19ರಂದು ಒಂದನೇ ಕಂತಿನ ಅನಿರ್ಬಂಧಿತ ಅನುದಾನ, ಜೂ. 22ರಂದು ಅನಿರ್ಬಂಧಿತ ಅನುದಾನ, 2021ರ ಫೆ. 3ರಂದು ಎರಡನೇ ಕಂತಿನ ಅನಿರ್ಬಂಧಿತ ಅನುದಾನ, 2021ರ ಮಾ. 30ರಂದು ಎರಡನೇ ಕಂತಿನ ನಿರ್ಬಂಧಿತ ಅನುದಾನ ಬಿಡುಗಡೆಯಾಗಿತ್ತು. ಮೊದಲ ಕಂತಿನ ಅನುದಾನ 47.69 ಲಕ್ಷ ರೂ. 2020ರ ಆ. 29ರಂದು ಬಿಡುಗಡೆಯಾಗಿತ್ತು. ಎರಡನೇ ಕಂತು 47.69 ಲಕ್ಷ ರೂ. ತಾ.ಪಂ. ಖಾತೆಗೆ ಜಮೆಯಾಗಲು ಬಾಕಿಯಾಗಿತ್ತು. ಈ ಕುರಿತು ಪತ್ರ ವ್ಯವಹಾರ ನಡೆಸಿದ್ದರೂ ಪ್ರತಿ ಕ್ರಿಯೆ ಸಕಾರಾತ್ಮಕವಾಗಿರಲಿಲ್ಲ.

ತಾ.ಪಂ. ಅನುದಾನ ಬಾಕಿ ಯಾದ ಕುರಿತು “ಉದಯವಾಣಿ’ ಮೇ 1ರಂದು “ಕುಂದಾಪುರ ತಾ.ಪಂ.: 2 ವರ್ಷವಾದರೂ ಬಾರದ ಅನುದಾನ, ರಾಜ್ಯದ ಬೇರೆಲ್ಲ ಕಡೆಗೂ ಬಿಡುಗಡೆ; ಇದೊಂದು ಮಾತ್ರ ಬಾಕಿ’ ಎಂದು ವರದಿ ಪ್ರಕಟಿಸಿತ್ತು. ವರದಿಗೆ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಡಾ| ನವೀನ್‌ ಭಟ್‌, ಜಿ.ಪಂ. ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್‌ ಮೊದಲಾದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next