Advertisement

ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ನೀರಿನಲ್ಲಿ ಮುಳುಗಿ ಮೃತ್ಯು

10:07 PM May 21, 2023 | Team Udayavani |

ಕುಂದಾಪುರ: ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು, ನೀರಿನಲ್ಲಿ ಮುಳುಗಿ ಮೀನುಗಾರ ಸಾವನ್ನಪ್ಪಿದ ಘಟನೆ ರವಿವಾರ ಕೋಟೇಶ್ವರ ಗ್ರಾಮದ ಹಳೆ ಅಳಿವೆಯಲ್ಲಿ ಸಂಭವಿಸಿದೆ.

Advertisement

ಕೋಟೇಶ್ವರ ಗ್ರಾಮದ ಹಳೆ ಅಳಿವೆ ನಿವಾಸಿ ನಾಗರಾಜ ಪೂಜಾರಿ (30) ಮೃತರು.

ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು, ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು, ಜತೆಗಿದ್ದ ಮೀನುಗಾರರು, ಸ್ಥಳಿಯರೆಲ್ಲ ರಕ್ಷಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಿರಲಿಲ್ಲ.

ಘಟನ ಸ್ಥಳಕ್ಕೆ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ಕುಂದಾಪುರ ಎಸ್‌ಐ ಈರಯ್ಯ, ಪೊಲೀಸ್‌ ಸಿಬಂದಿ ಭೇಟಿ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next