Advertisement

ಕುಂದಾಪುರ: ಶುಭ ಶುಕ್ರವಾರ ಆಚರಣೆ

08:20 PM Apr 19, 2019 | Team Udayavani |

ಕುಂದಾಪುರ: ತಾಲೂಕಿನೆಲ್ಲೆಡೆ ಪವಿತ್ರ (ಶುಭ) ಶುಕ್ರವಾರವನ್ನು ಕ್ರೈಸ್ತ ಬಾಂಧವರು ಚರ್ಚ್‌ಗಳಲ್ಲಿ ಭಕ್ತಿ – ಭಾವದಿಂದ ಆಚರಿಸಿದರು.

Advertisement

ಇಲ್ಲಿನ ರೋಜರಿ ಮಾತೆ ಇಗರ್ಜಿಯಲ್ಲಿ ಶುಭ ಶುಕ್ರವಾರದ ಪ್ರಯುಕ್ತ ಅದರ ದ್ಯೋತಕವಾಗಿ ಈ ಶಿಲುಬೆ ಯಾತ್ರೆಯನ್ನು ಸ್ಮರಿಸಿ ಬೆಳಗ್ಗೆ ಪ್ರಧಾನ ಧರ್ಮಗುರು ವಂ| ಸ್ಟ್ಯಾನಿ ತಾವ್ರೊ ಅವರ ನೇತೃತ್ವದಲ್ಲಿ ಯೇಸುವಿನ ಕಷ್ಟ ಕಾರ್ಪಣ್ಯದ ಶಿಲುಬೆಯ ಯಾತ್ರೆಯನ್ನು ಚರ್ಚಿನ ಮೈದಾನದಲ್ಲಿ ಸದಸ್ಯರ ಮತ್ತು ಯುವ ಸಂಘಟನೆಯ ಸದಸ್ಯರಿಂದ ನಡೆಸಲಾಯಿತು.ಈ ಶಿಲುಬೆಯ ಯಾತ್ರೆಯಲ್ಲಿ ಸಂತ ಮೇರಿಸ್‌ ಪಿ.ಯು. ಕಾಲೇಜಿನ·ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್‌ ಅಮೃತ್‌ಮಾರ್ಟಿಸ್‌, ಸಹಾಯಕ ಧರ್ಮಗುರು ವಂ| ರೋಯ್‌ ಲೋಬೊ, ಅನೇಕ ಧರ್ಮ ಭಗಿನಿಯರು, ಚರ್ಚ್‌ ಮಂಡಳಿಯ ಸದಸ್ಯರು ಭಕ್ತರು ಮತ್ತಿತರರು ಪಾಲ್ಗೊಂಡಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next