Advertisement

ಕುಂದಾಪುರ: 2 ಸಾವಿರ ರೂ.‌ನೋಟು ಕೇಳಿ, 52 ಸಾವಿರ ರೂ.‌ಕದ್ದ ಚಾಲಾಕಿ

07:32 PM Aug 12, 2022 | Team Udayavani |

ಕುಂದಾಪುರ : ತ್ರಾಸಿಯ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಡೀಸೆಲ್ ಹಾಕಿಸಲೆಂದು ಬಂದಿದ್ದವ, 2 ಸಾವಿರ ರೂ.ದು ನೋಟು ಇದೆಯಾ ಎಂದು ಕೇಳಿ, ಕ್ಯಾಶ್ ಡ್ರಾವರ್‌ನಲ್ಲಿದ್ದ 52 ಸಾವಿರ ರೂ. ಹಣವನ್ನು ಕದ್ದು, ಕಾರಿನಲ್ಲಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ತ್ರಾಸಿಯ ಪೆಟ್ರೋಲ್ ಬಂಕ್‌ನಲ್ಲಿ ಜೂ.19 ರಂದು ಸಂಜೆ 4.40 ರ ಸುಮಾರಿಗ ಹೊಂಡಾ ಅಮೇಜ್ ಕಾರಿನಲ್ಲಿ, ವಿದೇಶದ ವ್ಯಕ್ತಿಯಂತೆ ಕಾಣುವ ಅಪರಿಚಿತ ವ್ಯಕ್ತಿ ಡೀಸೆಲ್ ಹಾಕಿಸಲು ಬಂದಿದ್ದ. ಕಾರಿಗೆ 500 ರೂ. ಡೀಸೆಲ್ ಹಾಕಿಸಿ, ಬಳಿಕ ಕ್ಯಾಶ್ ಕೌಂಟರ್‌ನಲ್ಲಿದ್ದವರಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿ 2 ಸಾವಿರ ರೂ. ನೋಟು ಇದೆಯ ಎಂದು ಕೇಳಿದ್ದ. ಈ ವೇಳೆ ಕೌಂಟರ್‌ನಲ್ಲಿದ್ದವರು 1 ನೋಟು ಇದೆಯೆಂದು ಹೇಳಿದ್ದು, ಬೇರೆ ಕಡೆ ಡ್ರಾವರ್‌ನಲ್ಲಿದೆಯಾ ಎಂದು ಕೇಳಿದ್ದು, ಅವರು ಬೇರೆ ಕಡೆ ಗಮನ ಹರಿಸುವಂತೆ ಡ್ರಾವರ್‌ನಲ್ಲಿದ್ದ 52 ಸಾವಿರ ರೂ. ಅನ್ನು ಕಳ್ಳತನ ಮಾಡಿಕೊಂಡು, ಪರಾರಿಯಾಗಿದ್ದಾನೆ.

ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ಎಚ್‌ಪಿ ಕಂಪೆನಿಗೆ ದೂರು ನೀಡುವ ಪ್ರಕ್ರಿಯೆ ತಡವಾಗಿದ್ದರಿಂದ ಠಾಣೆಯಲ್ಲಿ ಕೇಸು ದಾಖಲು ವಿಳಂಬಗೊಂಡಿದೆ. ಪೆಟ್ರೋಲ್ ಬಂಕಿನ ಕ್ಯಾಶ್ ಕೌಂಟರ್‌ನಲ್ಲಿದ್ದ ಮನೋಜ್ ಎಂಬುವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next