Advertisement

ಕುಂಬಳೆ : ಗೋವಾಕ್ಕೆ ತೆರಳಿದ ಪೊಲೀಸ್‌ : 50 ಲ.ರೂ. ಮೌಲ್ಯದ ಡಾಲರ್‌ ವ್ಯವಹಾರ ಕೊಲೆಗೆ ಕಾರಣ?

11:58 PM Jun 29, 2022 | Team Udayavani |

ಕುಂಬಳೆ: ತಂಡವೊಂದು ಅಪಹರಿಸಿ ಕೊಲೆಗೈದ ಪುತ್ತಿಗೆಯ ಮುಗು ರೋಡಿನ ಅಬೂಬಕ್ಕರ್‌ ಸಿದ್ಧಿಕ್‌ (31) ಹತ್ಯೆಯ ಆರೋಪಿಗಳಲ್ಲಿ ಕೆಲವರು ಗೋವಾಕ್ಕೆ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರ ತಂಡ ಆರೋಪಿಗಳ ಪತ್ತೆಗೆ ಗೋವಾಕ್ಕೆ ತೆರಳಿದೆ.

Advertisement

ಮಂಜೇಶ್ವರದ ಅಜೀಜ್‌ ಮತ್ತು ರಹೀಂನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಗೋವಾಕ್ಕೆ ಪರಾರಿಯಾಗಲು ರಹೀಂ ಸಹಾಯ ನೀಡಿದ್ದು, ಅಬೂಬಕ್ಕರ್‌ ಸಿದ್ಧಿಕ್‌ ಅವರನ್ನು ಕಾರಿನಲ್ಲಿ ಬಂದ್ಯೋಡು ಆಸ್ಪತ್ರೆಗೆ ತಲಪಿಸಿರುವುದು ಅಜೀಜ್‌ ಎನ್ನಲಾಗಿದೆ.

ದುಬಾೖನಲ್ಲಿ ವ್ಯವಹಾರ?
ಕೊಲೆಗೆ ಕಾರಣ ಡಾಲರ್‌ ಸಾಗಾಟಕ್ಕೆ ಸಂಬಂಧಿಸಿದೆ. ಅಬೂಬಕ್ಕರ್‌ ಸಿದ್ಧಿಕ್‌ ವಿದೇಶಕ್ಕೆ ತೆರಳುವಾಗ ಉಪ್ಪಳದ ತಂಡವೊಂದು 50 ಲಕ್ಷ ರೂ. ಮೌಲ್ಯದ ಡಾಲರ್‌ ನೀಡಿದ್ದು, ಬಳಿಕ ಅದು ನಾಪತ್ತೆಯಾಗಿತ್ತು. ಇದೇ ಕೊಲೆಗೆ ಕಾರಣವಾಗಿರುವುದಾಗಿ ಸ್ಪಷ್ಟವಾಗಿದೆ. ಗುಪ್ತವಾಗಿ ಡಾಲರ್‌ ಬಚ್ಚಿಟ್ಟ ಬ್ಯಾಗ್‌ ದುಬಾಯಿಯಲ್ಲಿರುವ ಓರ್ವರಿಗೆ ಹಸ್ತಾಂತರಿಸಿರುವುದಾಗಿ ಅಬೂಬಕ್ಕರ್‌ ಸಿದ್ಧಿಕ್‌ ತಿಳಿಸಿದ್ದರೂ, ಅದು ಸಂಬಂಧಪಟ್ಟವರಿಗೆ ದೊರಕಿರಲಿಲ್ಲ.

ಮನೆಯಲ್ಲೂ ತಪಾಸಣೆ
ಸಿದ್ಧಿಕ್‌ ಸಹೋದರ ಅನ್ವರ್‌ ಮತ್ತು ಮಿತ್ರ ಅನ್ಸಾರಿ ಅವರನ್ನು ಕಳೆದ ಶುಕ್ರವಾರ ಅಪಹರಿಸಿ ಪೈವಳಿಕೆಯ ನಿರ್ಜನ ಸ್ಥಳದ ಮನೆಗೆ ಕರೆದೊಯ್ದು ಹಲ್ಲೆ ನಡೆಸಿದ ಬಳಿಕ ವಿದೇಶದಿಂದ ಸಿದ್ಧಿಖ್‌ ಅವರನ್ನು ರವಿವಾರ ಮನೆಗೆ ಕರೆಯಿಸಿ ಪೈವಳಿಕೆಯ ನಿರ್ಜನ ಸ್ಥಳದ ಮನೆಗೆ ಕರೆದೊಯ್ದು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿದ್ದರು. ಮೃತದೇಹವನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಂಡ ಪರಾರಿಯಾಗಿತ್ತು. ತಂಡ ಬಳಸಿದ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಂಡದಿಂದ ಹಲ್ಲೆ ನಡೆಸಿದ ಪೈವಳಿಕೆಯ ಮನೆಯಲ್ಲಿ ತನಿಖಾ ತಂಡ ತಪಾಸಣೆ ನಡೆಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next