Advertisement

Kumble: ಮಾವನ ಕೊಲೆಗೆ ಯತ್ನ: ಆರೋಪಿ ಬಂಧನ

08:33 PM Sep 30, 2024 | Team Udayavani |

ಕುಂಬಳೆ: ಮದ್ಯದ ಅಮಲಿನಲ್ಲಿ ಮನೆಗೆ ನುಗ್ಗಿ ಮಾವನನ್ನು ಕಬ್ಬಿಣದ ಸರಳಿನಿಂದ ಹೊಡೆದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಳಿಯ ಕರ್ನಾಟಕ ದೇರಳಕಟ್ಟೆ ನಿವಾಸಿ ಅನ್ವರ್‌ (32)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

Advertisement

ಪತ್ನಿಯ ತಂದೆ ದಂಡೆಗೋಳಿ ಕಿದೂರು ನಿವಾಸಿ ಮುಹಮ್ಮದ್‌ ಯೂಸುಫ್‌ ಅವರನ್ನು ಹೊಡೆದು ಕೊಲೆಗೈಯಲು ಯತ್ನಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಮನೆಗೆ ನುಗ್ಗಿ ಕಾಲಿಂಗ್‌ ಬೆಲ್‌ ಮಾಡಿದಾಗ ಹೊರಗೆ ಬಂದ ಮಾವನನ್ನು ಕಬ್ಬಿಣದ ಸರಳಿನಿಂದ ತಲೆಗೆ ಬಡಿದು ಕೊಲೆಗೆ ಯತ್ನಿಸಿದ್ದಾಗಿ ಆರೋಪಿಸಲಾಗಿದೆ. ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next