Advertisement

Kumbale: ನೇಣು ಬಿಗಿದು ದಾದಿ ಆತ್ಮಹತ್ಯೆ

11:54 PM Aug 26, 2024 | Team Udayavani |

ಕುಂಬಳೆ: ಆಸ್ಪತ್ರೆಯ ದಾದಿಯೋರ್ವ ರು ಕ್ವಾಟ್ರಸ್‌ನಲ್ಲಿ ಸೋಮವಾರ ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲ್ಲಂ ನಿವಾಸಿ ಸ್ಮೃತಿ (20) ಆತ್ಮಹತ್ಯೆ ಮಾಡಿಕೊಂಡವರು.

Advertisement

ಬಂದ್ಯೋಡ್‌ನ‌ ಖಾಸಗಿ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ಇವರು ಬೆಳಗ್ಗೆ 10 ಗಂಟೆಯ ವರೆಗೆ ಆಸ್ಪತ್ರೆಯಲ್ಲಿದ್ದರು. ಬಳಿಕ ಕ್ವಾಟ್ರಸ್‌ಗೆ ಹೋಗಿದ್ದರು. ಕೊಲ್ಲಂನಲ್ಲಿರುವ ತಾಯಿ ಫೋನ್‌ ಕರೆ ಮಾಡಿದಾಗ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಹತ್ತಿರದ ಕೊಠಡಿಯಲ್ಲಿ ವಾಸಿಸುವ ದಾದಿಗೆ ತಿಳಿಸಿದ್ದು, ಇದರಂತೆ ಕೊಠಡಿಗೆ ಹೋಗಿ ನೋಡಿದಾಗ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next