Advertisement

ತಾಯಿ ಮೃತಪಟ್ಟ ಕೆಲವೇ ಹೊತ್ತಿನಲ್ಲಿ ಪುತ್ರ ನಿಧನ: ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಕ್ರಿಯೆ

09:38 PM Jan 11, 2023 | Team Udayavani |

ಕುಂಬಳೆ: ಒಂದೇ ದಿನ ನಿಧನ ಹೊಂದಿದ ತಾಯಿ ಮತ್ತು ಪುತ್ರನ ಅಂತ್ಯಕ್ರಿಯೆ ಒಂದೇ ಚಿತೆಯಲ್ಲಿ ನಡೆಯಿತು.

Advertisement

ಬಾಯಾರು ಚೇರಾಲ್‌ ನಿವಾಸಿ ದಿ|ಚನಿಯಪ್ಪ ನಾಯ್ಕ ಅವರ ಪತ್ನಿ ಪಾರ್ವತಿ(80) ಮತ್ತು ಪುತ್ರ ರಘುರಾಮ ನಾಯ್ಕ(61) ಅವರ ಶವ ದಹನ ಒಂದೇ ಚಿತೆಯಲ್ಲಿ ನಡೆಯಿತು.

ಸೋಮವಾರ ಬೆಳಗ್ಗೆ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ರಘುರಾಮ ನಾಯ್ಕ ಅವರನ್ನು ದೇರಳಕಟ್ಟೆ ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ತಾಯಿ ಪಾರ್ವತಿ ಅಸೌಖ್ಯದಿಂದ ನಿಧನ ಹೊಂದಿದರು. ಈ ಕಾರಣದಿಂದ ಪುತ್ರ ರಘುರಾಮ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ತಾಯಿ ಪಾರ್ವತಿಯ ಅಂತ್ಯಕ್ರಿಯೆಗಾಗಿ ಸಿದ್ಧತೆ ನಡೆಸುತ್ತಿದ್ದಂತೆ ಪುತ್ರ ರಘುರಾಮ ನಾಯ್ಕ ನಿಧನ ಹೊಂದಿದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ಮೃತದೇಹವನ್ನು ಮಂಗಳವಾರ ಬೆಳಗ್ಗೆ ಒಂದೇ ಚಿತೆಯಲ್ಲಿ ದಹನ ಮಾಡಲಾಯಿತು.

ಇದನ್ನೂ ಓದಿ: ಶಬರಿಮಲೆಗೆ ತೆರಳಿದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ನಿಧನ

Advertisement

Udayavani is now on Telegram. Click here to join our channel and stay updated with the latest news.

Next