Advertisement

ಕುಂಬಳೆ :ಕೊಲೆ ಪ್ರಕರಣ; ಆರೋಪಿಗಳ ಪತ್ತೆಗಾಗಿ ಲುಕೌಟ್‌ ನೋಟಿಸ್‌ ಬಿಡುಗಡೆ

06:02 PM Jun 30, 2022 | Team Udayavani |

ಕುಂಬಳೆ: ಪುತ್ತಿಗೆಯ ಮುಗುರೋಡಿನ ಅಬೂಬಕ್ಕರ್‌ ಸಿದ್ಧಿಕ್‌(31) ಹತ್ಯೆಯ ಇಬ್ಬರು ಆರೋಪಿಗಳಾದ ಮಂಜೇಶ್ವರ ಉದ್ಯಾವರ ಅಬ್ದುಲ್‌ ಅಜೀಜ್‌(36) ಮತ್ತು ಅಬ್ದುಲ್‌ ರಹೀಂ (41) ನನ್ನು ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣನ್‌ ನಾಯರ್‌ ನೇತೃತ್ವದ ತಂಡ ಬಂಧಿಸಿದೆ.

Advertisement

ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಲುಕೌಟ್‌ ನೋಟಿಸ್‌ ಬಿಡುಗಡೆಗೊಳಿಸಿ ಎಲ್ಲ ವಿಮಾನ ನಿಲ್ದಾಣಗಳಿಗೆ ರವಾನಿಸಲಾಗಿದೆ.

ಅನ್ವರ್‌ ಮತ್ತು ಅನ್ಸಾರಿಯವರನ್ನು ಮತ್ತು ಅಬೂಬಕ್ಕರ್‌ ಸಿದ್ಧಿಕ್‌ ಅವರನ್ನು ತಂಡವು ಕರೆದೊಯ್ಯಲು, ಹತ್ಯೆ ಬಳಿಕ ಬಂದ್ಯೋಡು ಆಸ್ಪತ್ರೆಗೆ ದಾಖಲಿಸಲು, ಬಳಿಕ ಪರಾರಿಯಾಗಲು ಬಳಸಿದ 5 ಕಾರುಗಳನ್ನು ವಶಪಡಿಸಲಾಗಿದೆ. ಪ್ರಕರಣದ ಆರೋಪಿಯೋರ್ವನ ಮನೆಯಿಂದ 4.50 ಲಕ್ಷ ರೂ. ಹಣವನ್ನು ತನಿಖಾ ತಂಡ ವಶಪಡಿಸಿದೆ.

ಚಿನ್ನ ಖರೀದಿಸಲು ವಿದೇಶಕ್ಕೆ ಕಳುಹಿಸಿದ 40 ಲಕ್ಷ ರೂ. ಬೆಲೆಯ ಡಾಲರ್‌ ನಾಪತ್ತೆಯಾಗಿರುವುದು ಅಪಹರಣ, ಹತ್ಯೆಗೆ ಕಾರಣವೆಂಬುದಾಗಿ ಸ್ಪಷ್ಟವಾಗಿದೆ. ಎಲ್ಲ ಆರೋಪಿಗಳ ಮಾಹಿತಿ ದೊರಕಿದ್ದು ಶೀಘ್ರವಾಗಿ ಎಲ್ಲರನ್ನೂ ಬಂಧಿಸಲಾಗುವುದೆಂದು ಎಸ್‌ಪಿ ಡಾ| ವೈಭವ್‌ ಸಕ್ಸೇನ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next