Advertisement

ವೀಕೆಂಡ್ ಕರ್ಪ್ಯೂ: ತಜ್ಞರ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳಿ; ಎಚ್ ಡಿಕೆ

05:30 PM Jan 19, 2022 | Team Udayavani |

ಬೆಂಗಳೂರು : ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ತೆಗೆಯುವ ವಿಚಾರದಲ್ಲಿ ತಜ್ಞರ ಸಲಹೆ ಪಡೆದೇ ಮುಂದಿನ‌ ಹೆಜ್ಜೆ ಇಡುವುದು ಸೂಕ್ತ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗಾರರಿಗೆ ಈ ಹೇಳಿಕೆ ನೀಡಿದ್ದಾರೆ.ವಿಕೆಂಡ್ ಕರ್ಪ್ಯೂ, ನೈಟ್ ಕರ್ಫ್ಯೂ ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ತಜ್ಜರ ಸಲಹೆ ಪಡೆಯುವುದು ಸೂಕ್ತ. ನಿನ್ನೆ 41 ಸಾವಿರ ಕೇಸ್ ದಾಖಲಾಗಿದೆ .ಸಣ್ಣ ಸಣ್ಣ ರೈತರು, ಬೀದಿ ಬದಿ ವ್ಯಾಪಾರಿಗಳಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿರೋಧ ಪಕ್ಷದವರು ಹೇಳ್ತಾರೆ ಅಂತಾರೆ, ಪ್ಯಾಕೇಜ್ ಕೊಡಲು ಆಗುತ್ತಾ ಅಂತ ಪ್ರಶ್ನಿಸಿದ್ದಾರೆ. ಹಾಗಾದರೆ ಸರ್ಕಾರ ಇರೋದು ಏತಕ್ಕೆ ? ಹೊತ್ತಿನ ಊಟ ಇಲ್ಲದೆ ಸಾವು -ನೋವು ಆಗ್ತಿದೆ ಎಂಬುದು ಗೊತ್ತಿಲ್ಲವೇ ? ಎಂದು ಪ್ರಶ್ನಿಸಿದರು.

ಇಂದು ಪಕ್ಷದ ಪ್ರಮುಖರ ಸಭೆ ಕರೆಯಲಾಗಿದೆ. ಇವತ್ತಿನ ಸಭೆಯಲ್ಲಿ ಸಂಘಟನೆ ದೃಷ್ಟಿಯಿಂದ ಸಭೆ ಕರೆಯಲಾಗಿದೆ. ಜಲಧಾರೆ ಬಗ್ಗೆ ನಿನ್ನೆ ಸುದೀರ್ಘ ಚರ್ಚೆ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next