Advertisement

ಕುಮಾರಸ್ವಾಮಿಯೇ 5 ವರ್ಷ ಸಿಎಂ: ಪಾಟೀಲ್‌ 

01:07 AM Feb 23, 2019 | |

 ಬಾಗಲಕೋಟೆ: ಸಮ್ಮಿಶ್ರ ಸರ್ಕಾರದಲ್ಲಿ ಐದು ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.

Advertisement

ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿರುವ ವಿಶ್ವಗುರು ಬಸವಣ್ಣನವರ ಐಕ್ಯ ಮಂಟಪಕ್ಕೆ ಭೇಟಿ ನೀಡಿ, ಬಿರುಕುಬಿಟ್ಟ ಶಿವಲಿಂಗ ವೀಕ್ಷಣೆ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಬಸವಕಲ್ಯಾಣದ ಶಾಸಕ ಬಿ.ನಾರಾ ಯಣರಾವ್‌ ಹೇಳಿಕೆ ಭಾವನಾತ್ಮಕದಿಂದ ಕೂಡಿದೆ.ಸಿದ್ದರಾಮಯ್ಯ 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಅವರೇ ಸಿಎಂ ಆಗಬೇಕೆಂಬುದು ಸಿದ್ದರಾಮಯ್ಯನವರ ಆಪ್ತರ ಆಶಯವಾಗಿದೆ. ಹೀಗಾಗಿ, ಶಾಸಕ ನಾರಾಯಣರಾವ್‌ ಅವರು ಭಾವನಾತ್ಮಕವಾಗಿ ಆ ರೀತಿ ಹೇಳಿದ್ದಾರೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಐದು ವರ್ಷ ಕುಮಾರಸ್ವಾಮಿ ಅವರೇ ಸಿಎಂ ಆಗಿ ಇರುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next