Advertisement

ಇಂದು ಆಸ್ಪತ್ರೆಯಿಂದ ಕುಮಾರಸ್ವಾಮಿ ಡಿಸ್ಚಾರ್ಜ್

11:56 PM Mar 23, 2024 | Team Udayavani |

ಬೆಂಗಳೂರು: ಚೆನ್ನೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ರವಿವಾರ ಬೆಂಗಳೂರಿಗೆ ಮರಳಲಿದ್ದಾರೆ.

Advertisement

ಹೃದಯಕ್ಕೆ ಸಂಬಂಧಿಸಿ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಮೂರನೇ ಬಾರಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ಮಾ.20 ರಂದು ಚೆನ್ನೈಗೆ ತೆರಳಿದ್ದರು. ಮಾ.21ರಂದು ಬೆಳಗ್ಗೆ ಚಿಕಿತ್ಸೆ ಪಡೆದಿದ್ದರು.

ರಕ್ತನಾಳದ ಮೂಲಕ ಸ್ಟಂಟ್‌ ಅಳವಡಿಕೆ ಮಾಡಲಾಗಿದ್ದು, 2 ದಿನಗಳ ವಿಶ್ರಾಂತಿ ಬಳಿಕ ರವಿವಾರ ಬೆಳಗ್ಗೆ ಹೊರಟು 10 ಗಂಟೆಯೊಳಗಾಗಿ ಬೆಂಗಳೂರಿಗೆ ಮರಳಲಿದ್ದಾರೆ.

ಸೋಮವಾರದಿಂದ ಚುನಾವಣ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next