Advertisement

ಕುಲಭೂಷಣ ಜಾಧವ್‌ಗೆ ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿಗೆ ಅವಕಾಶ: ಕೇಂದ್ರ ಸಂತಸ

03:11 AM Jun 12, 2021 | Team Udayavani |

ಹೊಸದಿಲ್ಲಿ/ಇಸ್ಲಾಮಾಬಾದ್‌: ಪಾಕಿಸ್ಥಾನದ ಸೆರೆಯಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ ಜಾಧವ್‌ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೇಂದ್ರ ಸರಕಾರ ಸಂತಸ ವ್ಯಕ್ತಪಡಿಸಿದೆ.

Advertisement

ಆದರೆ ಜಾಧ ವ್‌ಗೆ ತಟಸ್ಥ ಕಾನೂನು ಸಂಸ್ಥೆ ಅಥವಾ ಭಾರ  ತೀಯ ವಕೀಲರ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿ ಕೊಡ ಬೇಕು ಎಂದು ಶುಕ್ರವಾರ ಹೊಸದಿಲ್ಲಿಯಲ್ಲಿ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಇಲ್ಲದೇ ಇದ್ದರೆ, ಈ ಅವಕಾಶಕ್ಕೆ ಅರ್ಥವೇ ಇಲ್ಲದಂತಾಗುತ್ತದೆ ಎಂದು ಸರಕಾರ ತಿಳಿಸಿದೆ.

ಅಂತಾರಾಷ್ಟ್ರೀಯ ನ್ಯಾಯಾ ಲಯ ಮರಣದಂಡನೆ ಶಿಕ್ಷೆ ಪರಿಶೀ ಲಿಸುವಂತೆ ಪಾಕಿಸ್ಥಾನ ಸರಕಾರಕ್ಕೆ ಸೂಚಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಕೇಂದ್ರ ಸರಕಾರ ಕಟುವಾಗಿ ಆಕ್ಷೇಪಿಸಿತ್ತು.

ಗುರುವಾರ ಪಾಕಿಸ್ಥಾನ ಸಂಸತ್‌ನ ನ್ಯಾಶನಲ್‌ ಅಸೆಂಬ್ಲಿ ಜಾಧವ್‌ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಿಕೊಡುವ ಮಸೂದೆಗೆ ಒಪ್ಪಿಗೆ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next