Advertisement

ಕುಲಭೂಷಣ್‌ ಜಾಧವ್‌: ಇಂದಿನಿಂದ ವಿಚಾರಣೆ

01:00 AM Feb 18, 2019 | Harsha Rao |

ನ್ಯೂಯಾರ್ಕ್‌: ಪುಲ್ವಾಮಾ ದಾಳಿಯಿಂದಾಗಿ ಭಾರತ ಹಾಗೂ ಪಾಕಿಸ್ಥಾನದ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿರುವಾಗಲೇ, ಪಾಕಿಸ್ಥಾನದಲ್ಲಿ ಬಂಧಿತ ಭಾರತೀಯ ಕುಲಭೂಷಣ್‌ ಜಾಧವ್‌ ಗಲ್ಲು ಶಿಕ್ಷೆ ತಡೆಗೆ ಭಾರತವು ವಿಶ್ವಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದೆ. ಸೋಮವಾರ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಈ ಹಿಂದೆ ಅಂತಾರಾಷ್ಟ್ರೀಯ ನ್ಯಾಯಾಲಯವು ಭಾರತದ ವಾದಕ್ಕೆ ಮನ್ನಣೆ ನೀಡಿದ್ದರಿಂದ, ಜಾಧವ್‌ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಲಾಗಿತ್ತು. ಈಗ ಈ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ವಾದ ಮಂಡಿಸಲಿದೆ. ಈ ಪ್ರಕ್ರಿಯೆ ಫೆ. 21 ರವರೆಗೆ ನಡೆಯಲಿದೆ. ಭಾರತದ ವಾದಕ್ಕೆ ಮನ್ನಣೆ ಲಭ್ಯವಾದರೆ ಜಾಧವ್‌ ಬಿಡುಗಡೆಗೆ ಆದೇಶ ನೀಡುವ ಸಾಧ್ಯತೆಯಿದೆ. ಭಾರತದ ಗೂಢಚಾರ್ಯೆ ಆರೋಪದಡಿ, ಪಾಕಿಸ್ಥಾನದ 2017ರ ಏಪ್ರಿಲ್‌ನಲ್ಲಿ ಇರಾನ್‌ನಿಂದ ಇವರನ್ನು ಬಂಧಿಸಿತ್ತು. ಪುಲ್ವಾಮಾ ದಾಳಿ ನಡೆದ ಹಿನ್ನೆಲೆಯಲ್ಲೇ ಈ ವಿಚಾರಣೆ ನಡೆಯಲಿರುವುದರಿಂದ ಕೋರ್ಟ್‌ನಲ್ಲಿ ಭಾರತದ ವಾದಕ್ಕೆ ಇನ್ನಷ್ಟು ಪುಷ್ಟಿ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next