Advertisement

ಕುಕ್ಕೆ ಕ್ಷೇತ್ರದಲ್ಲಿ ಜನಸಾಗರ: ಸೇವಾ ರಶೀದಿಗಾಗಿ ಪರದಾಟ, ಸಿಬ್ಬಂದಿ ಜೊತೆ ವಾಗ್ವಾದ

10:43 PM Dec 06, 2020 | Team Udayavani |
ಕುಕ್ಕೆ: ಪ್ರಸಿದ್ದ ಸುಬ್ರಮಣ್ಯ ದೇವಸ್ಥಾನದಲ್ಲಿ ಷಷ್ಟಿ ಹಾಗೂ ಆಶ್ಲೇಷ ನಕ್ಷತ್ರ ದಿನವಾದ ರವಿವಾರ ಭಾರಿ ಜನಸಂದಣಿ ಕಂಡು ಬಂದಿದೆ. ಆಶ್ಲೇಷ ಪೂಜೆ ನೆರವೇರಿಸಲು ನಾಡಿನ ವಿವಿಧೆಡೆಯಿಂದ ಭಕ್ತ ಜನಸಾಗರವೇ ಹರಿದು ಬಂದಿದೆ. ದೇಗುಲದ ರಥ ಬೀದಿ, ಹೊರಾಂಗಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿರುವ ಭಕ್ತರು ರಶೀದಿಗಾಗಿ ದುಂಬಾಲು ಬೀಳುತಿದ್ದಾರೆ. ಆದರೆ ಸೀಮಿತ ಸಂಖ್ಯೆಯಲ್ಲಿ ಸೇವಾ ರಶೀದಿ ವಿತರಿಸುತ್ತಿರುವುದರಿಂದ ದೂರದಿಂದ ಬಂದ ಭಕ್ತರಿಗೆ ರಶೀದಿ ಸಿಗದೆ ಸೇವಾ ಕೌಂಟರ್ ಸಿಬ್ಬಂದಿಗಳ ಜತೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.
Advertisement

Udayavani is now on Telegram. Click here to join our channel and stay updated with the latest news.

Next