Advertisement

Kukke Subrahmanya Temple: ಭಕ್ತ ಜನಸಂದಣಿ

12:29 AM Aug 26, 2024 | Team Udayavani |

ಸುಬ್ರಹ್ಮಣ್ಯ: ಎರಡು ದಿನಗಳ ಸರಕಾರಿ ರಜೆ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಭಕ್ತ ಜನಸಂದಣಿ ಕಂಡುಬಂತು.

Advertisement

ಶನಿವಾರ ಹಾಗೂ ರವಿವಾರ ಸರಕಾರಿ ರಜೆ ಇದ್ದ ಹಿನ್ನೆಲೆಯಲ್ಲಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಹೆಚ್ಚಿನ ಭಕ್ತರ ಆಗಮನವಾಗಿದೆ.

ದೇವಸ್ಥಾನದ ಒಳಾಂಗಣ, ರಥಬೀದಿ, ಪೇಟೆಯಲ್ಲೂ ಭಕ್ತರ ದಟ್ಟಣೆ ಕಂಡುಬಂದಿತ್ತು. ಪೇಟೆಯಲ್ಲಿ ಹೊಸ ಸಂಚಾರ, ಪಾರ್ಕಿಂಗ್‌ ನಿಯಮಾವಳಿ ಜಾರಿಗೆ ತಂದಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next