ಕೊಪ್ಪಳ: ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳದಲ್ಲೂ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ ಸಾರಿಗೆ ಘಟಕದಲ್ಲಿ ಟ್ಯಾಕ್ಸಿಗಳ ಓಡಾಟ ನಿರಾಂತಕವಾಗಿ ನಡೆದಿದೆ.
ಜಿಲ್ಲೆಯ ವಿವಿಧ ಸಾರಿಗೆ ಘಟಕದಲ್ಲೂ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿ ಕರ್ತವ್ಯ ದಿಂದ ದೂರ ಉಳಿದಿದ್ದಾರೆ. ಆದರೆ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಾರಿಗೆ ಘಟಕದ ಅಧಿಕಾರಿಗಳು ಖಾಸಗಿ ವಾಹನಗಳ ನೆರವು ಪಡೆದಿದ್ದಾರೆ.
ಇದನ್ನೂ ಓದಿ:ಕರಾವಳಿಗೆ ತಟ್ಟದ ಬಸ್ ಬಂದ್ ಬಿಸಿ: ಮಂಗಳೂರು KSRTC ಬಸ್ ನಿಲ್ದಾಣದೊಳಗೆ ಬಂದ ಖಾಸಗಿ ಬಸ್ ಗಳು
ಟ್ಯಾಕ್ಸಿಗಳು, ಮಿನಿ ಬಸ್ ಗಳು ದೂರದ ಊರು ಹಾಗೂ ಗ್ರಾಮೀಣ ಭಾಗಗಳಿಗೆ ಓಡಾಟ ಶುರು ಮಾಡಿವೆ. ಬೆಳಗ್ಗೆ ನಾಲ್ಕು ಸಾರಿಗೆ ಬಸ್ ಗಳು ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದಿಂದ ಎಸ್ಕಾರ್ಟ್ ಮೂಲಕ ವಿವಿಧ ಪಟ್ಟಣಗಳಿಗೆ ತೆರಳಿವೆ.
ಇದನ್ನೂ ಓದಿ: ಮುಷ್ಕರದ ಮಧ್ಯೆಯೂ ಬಸ್ ಬಂತು: ಕರ್ತವ್ಯ ಪ್ರಜ್ಞೆ ಮೆರೆದ ಹೊಸಪೇಟೆ ಡಿಪೋ ನೌಕರರು
ಪೊಲೀಸ್ ಪಡೆಯು ಬಸ್ ನಿಲ್ದಾದಲ್ಲಿಯೇ ಠಿಕಾಣಿ ಹೂಡಿ ಸಂಚಾರಕ್ಕೆ ಯಾವ ಅಡೆತಡೆ ಬಾರದಂತೆ ನಿಗಾ ವಹಿಸಿದ್ದಾರೆ. ಅಧಿಕಾರಿ ವರ್ಗವೂ ಹೆಚ್ಚಿನ ನಿಗಾ ವಹಿಸಿವೆ. ಬಸ್ ನಿಲ್ದಾಣದ ಸುತ್ತ ಸಿಆರ್ಪಿಸಿ 144ಕಲಂ ನಡಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಆದರೆ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ತಯಾರಿಯಲ್ಲಿದ್ದಾರೆ.
ಇದನ್ನೂ ಓದಿ: ಕೋವಿಡ್ ಆರ್ಥಿಕ ಸಂಕಷ್ಟದಿಂದ ತಪ್ಪಿಸಲು 30 ಲಕ್ಷ ರೈತರಿಗೆ ಸಾಲ ಭಾಗ್ಯ