Advertisement
ಕರ್ನಾಟಕ ರಾಜ್ಯ ರಸ್ತೆ ನಿಗಮದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಎಸ್ಡಿಪಿ ಯೋಜನೆಯಡಿ ನಿರ್ಮಾಣಗೊಂಡ ಡೀಸೆಲ್ ಬಂಕ್ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶಗಳಿಗೆ ಬಸ್ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು.
Related Articles
Advertisement
ಕೆಎಸ್ಆರ್ಟಿಸಿ ಬಸ್ಗಳು ಖಾಸಗಿ ಬಸ್ ನಿಲ್ದಾಣದಳೊಗೆ ಕಡ್ಡಾಯವಾಗಿ ಹೋಗಿ ಬರಬೇಕು ಇದರಿಂದ ಪ್ರಯಾಣಿಕರಿಗೆ ಹೆಚ್ಚು ಸಹಾಯವಾಗುತ್ತದೆ. ಪಪಂ ಜನಪ್ರತಿನಿಧಿಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ. ಕೆಎಸ್ಆರಟಿಸಿ ಸಂಸ್ಥೆ ದೇಶದಲ್ಲಿಯೇ ನಂ.1 ಸಂಸ್ಥೆಯಾಗಲು ಶ್ರಮಿಸಿರುವ ಸಂಸ್ಥೆಯ ಎಲ್ಲಾ ನೌಕರ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿಪಂ ಸದಸ್ಯ ಡಿ.ಜಿ.ವಿಶ್ವನಾಥ್, ತಾಪಂ ಅಧ್ಯಕ್ಷೆ ಸುಲೋಚನಮ್ಮ, ಪಪಂ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿದರು. ತಾಪಂ ಸದಸ್ಯ ವಿಜಯಕುಮಾರ್, ಪಪಂ ಉಪಾಧ್ಯಕ್ಷೆ ವೀಣಾ ಸುರೇಶ್, ಸದಸ್ಯರಾದ ಸುರೇಶ್ಹೊಸಕೇರಿ, ಕುಬೇಂದ್ರಪ್ಪ, ಅಣ್ಣಪ್ಪ, ವಿಜೇಂದ್ರಪ್ಪ, ವಿಜಯಮ್ಮ, ಗ್ರಾಪಂ ಅಧ್ಯಕ್ಷೆ ಲಕ್ಷಮ್ಮ, ಉಪಾಧ್ಯಕ್ಷ ಮಾದಪ್ಪ, ವ್ಯವಸ್ಥಾಪಕ ಶ್ರೀನಿವಾಸ್ ಇತರರಿದ್ದರು.