Advertisement

ಕೆಎಸ್‌ಸಿಎ ಕ್ರಿಕೆಟ್‌: ನೇತಾಜಿ ಪರ್ಕಳಕ್ಕೆ ಪ್ರಶಸ್ತಿ

09:30 PM Mar 12, 2023 | Team Udayavani |

ಮಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಶ್ರಯದಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯ ಮಟ್ಟದ ಎರಡನೇ ವಿಭಾಗದ ಕ್ರಿಕೆಟ್‌ ಪಂದ್ಯಾಟದ ಫೈನಲ್‌ನಲ್ಲಿ ಬ್ರಹ್ಮಾವರ ನ್ಪೋರ್ಟ್ಸ್ ಕ್ಲಬ್‌ ತಂಡವನ್ನು 2 ವಿಕೆಟ್‌ ಅಂತರದಿಂದ ಸೋಲಿಸಿದ ನೇತಾಜಿ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಬ್ರಹ್ಮಾವರ ತಂಡವು ನೇತಾಜಿ ತಂಡದ ಬಿಗು ಬೌಲಿಂಗ್‌ ದಾಳಿಯೆದುರು ಒಂದು ಹಂತದಲ್ಲಿ 101 ರನ್ನಿಗೆ 8 ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ತಂಡದ ನಾಯಕ ಅಭಿಜಿತ್‌, ದಿವ್ಯಾಂಶು ಜತೆಗೂಡಿ 115 ರನ್‌ ಪೇರಿಸಿದ್ದರಿಂದ ತಂಡದ ಮೊತ್ತ 211ಕ್ಕೇರಿತು. ಅಭಿಜಿತ್‌ 98 ರನ್‌ ಗಳಿಸಿದರು. ನಿಖೀಲ್‌ 3, ಕುಂದನ್‌ 2, ಧೀರಜ್‌ 2, ರೋಹಿತ್‌ 2 ವಿಕೆಟ್‌ ಪಡೆದರು.

ವಿಜಯದ ಗುರಿಯನ್ನು ಬೆನ್ನತ್ತಿದ ನೇತಾಜಿ ತಂಡಕ್ಕೆ ನಿತಿನ್‌ ಉಪಾಧ್ಯ (72), ನೀಲವ್‌ (36) ಮೊದಲ ವಿಕೆಟಿಗೆ 85 ರನ್‌ಗಳ ಭದ್ರ ಬುನಾದಿ ಒದಗಿಸಿದರು. ಆ ಬಳಿಕ ತಂಡ ಕುಸಿತ ಕಂಡರೂ ಆಶೀಷ್‌ ನಾಯಕ್‌ (40), ಹೃಷಬ್‌ ನಾಯಕ್‌ (27) ಅವರ ಉಪಯುಕ್ತ ಆಟದಿಂದಾಗಿ ಚೇತರಿಸಿಕೊಂಡಿತು. ಅಂತಿಮವಾಗಿ ನೇತಾಜಿ ತಂಡವು 20 ಎಸೆತ ಬಾಕಿ ಇರುವಂತೆ 2 ವಿಕೆಟ್‌ಗಳ ಜಯವನ್ನು ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next