Advertisement

ಸಿದ್ಧು-ಪರಂ ಸೋಲಿನ ಗುಟ್ಟು ರಟ್ಟು ಮಾಡಿದ ಈಶ್ವರಪ್ಪ!

12:12 PM Mar 12, 2023 | Team Udayavani |

ಪುತ್ತೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಾ| ಪರಮೇಶ್ವರ್ ಅವರ ಸೋಲಿನ ಹಿಂದಿನ ಗುಟ್ಟನ್ನು ಮಾಜಿ ಸಚಿವ ಕೆಎಸ್ ಈಶ್ವರಪ್ಪ ರಟ್ಟು ಮಾಡಿದ್ದಾರೆ.

Advertisement

ಶನಿವಾರ ಪುತ್ತೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೊರಟಗೆರೆಯಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ| ಪರಮೇಶ್ವರ್‌ ಅವರ ಸೋಲಿಗೆ ಕಾರಣ ಏನು ಎಂದು ಸ್ವತಃ ನಾನೇ ಅವರ ಬಳಿ ಕೇಳಿದ್ದೆ. ಆಗ ಅವರು ಸಿದ್ಧರಾಮಯ್ಯ ಅವರತ್ತ ಬೆರಳು ತೋರಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯ ಸೋತಾಗಲೂ ನಾನು ಸೋಲಿಗೆ ಕಾರಣ ಏನು ಎಂದು ಸಿದ್ಧರಾಮಯ್ಯ ಬಳಿ ಪ್ರಶ್ನಿಸಿದ್ದೆ. ಸಿದ್ಧರಾಮಯ್ಯ ಅವರು ಪರಮೇಶ್ವರ ಅವರ ಕಡೆ ಬೊಟ್ಟು ಮಾಡಿದ್ದರು. ಹೀಗೆ ಬೆನ್ನಿಗೆ ಚಾಕು ಹಾಕುವ ಪ್ರವೃತ್ತಿ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ ಎಂದು ಈಶ್ವರಪ್ಪ ವಾಗ್ಧಾಳಿ ನಡೆಸಿದರು.

ಭಾಷಣದುದ್ದಕ್ಕೂ ಸಿದ್ಧರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ ಈಶ್ವರಪ್ಪ, ಗೋಹತ್ಯೆ ನಿಷೇಧ, ಮತಾಂತರ ಕಾಯ್ದೆಯನ್ನು ಬಿಜೆಪಿ ಸರಕಾರ ತಂದಿರುವುದೇ ತಪ್ಪು ಅನ್ನುವ ಸಿದ್ಧರಾಮಯ್ಯ ತಾಕತ್ತಿದ್ದರೆ ಕಾಂಗ್ರೆಸ್‌ ಪ್ರಣಾಳಿಕೆ ಯಲ್ಲಿ ಗೋ ಹತ್ಯೆಗೆ ಅವಕಾಶ, ಮತಾಂತರ ನಿಷೇಧರದ್ದು ಅನ್ನುವುದನ್ನು ಸೇರಿಸಲಿ ಎಂದು ಸವಾಲೆಸೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next