Advertisement

ಆಗ ಭಾರತ್‌ ತೋಡೋ ಈಗ ಜೋಡೋ ಯಾತ್ರೆ: ಈಶ್ವರಪ್ಪ

08:21 PM Sep 08, 2022 | Team Udayavani |

ಶಿವಮೊಗ್ಗ: ಅಖಂಡ ಭಾರತವನ್ನು ತುಂಡು ಮಾಡಿದವರು ಈಗ ಭಾರತ ಜೋಡೋ ಯಾತ್ರೆ ಮಾಡಲು ಹೊರಟಿದ್ದಾರೆ. ನಾವು ಕಳೆದುಕೊಂಡ ಪಾಕಿಸ್ತಾನ, ಬಾಂಗ್ಲಾದೇಶವನ್ನು ಒಗ್ಗೂಡಿಸಿ ಭಾರತ್‌ ಜೋಡೋ ಯಾತ್ರೆ ಮಾಡಿ ಅಖಂಡ ಭಾರತ ಮಾಡಲಿ. ಆಗ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ತೃಪ್ತಿ ಸಿಗುತ್ತದೆ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ  ನೇತೃತ್ವದಲ್ಲಿ ಪ್ರಿಯಾಂಕಾ ಗಾಂ ಧಿ ಭಾರತ್‌ ಜೋಡೋ ಯಾತ್ರೆ ನಡೆಸುತ್ತಿರುವುದು ಸಂತೋಷದ ವಿಚಾರ. ಹಿಂದೆ ಅ ಧಿಕಾರಕ್ಕಾಗಿ ದೇಶವನ್ನು ಮೂರು ತುಂಡು ಮಾಡಿದವರಿಗೆ ರಾಹುಲ್‌ ಗಾಂಧಿ ಯ ಭಾರತ್‌ ಜೋಡೋ ಯಾತ್ರೆ ಉತ್ತರ ಕೊಡಲಿ. ಹಿಂದೆ ಭಾರತ್‌ ತೋಡೋ ಮಾಡಿದ್ದರು. ಈಗ ಭಾರತ್‌ ಜೋಡೋ ಮಾಡಲು ಹೊರಟಿದ್ದಾರೆ. ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೊರಟಿದ್ದಾರೆ. ಯಾತ್ರೆ ಮಾಡಿದರಷ್ಟೇ ಸಾಲದು, ಅವರ ಮನದ ಭಾವನೆಯೊಳಗೆ ಭಾರತ್‌ ಜೋಡೋ ಇರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next