Advertisement

ಲೋಕಸಭೆ ಚುನಾವಣೆಗೆ ಹೆದರಲ್ಲ: ಕೆ.ಎಸ್‌.ಈಶ್ವರಪ್ಪ

12:30 AM Feb 19, 2019 | Team Udayavani |

ಬಾಗಲಕೋಟೆ: ದೇಶದ ಪ್ರಧಾನಿಯೇ ನಮ್ಮ ಕೈಯಲ್ಲಿದ್ದಾರೆ. ಹೀಗಾಗಿ ಬರುವ ಲೋಕಸಭೆ ಚುನಾವಣೆಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಬಾಗಲಕೋಟೆ ಕ್ಷೇತ್ರವೂ ಸೇರಿ ರಾಜ್ಯದ 22 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು. 

Advertisement

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಚಾಲಕರನ್ನಾಗಿ ಪಕ್ಷ ಜವಾಬ್ದಾರಿ ನೀಡಿದೆ. ಈ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಕ್ಷೇತ್ರ ದೇಶಭಕ್ತರ ಕ್ಷೇತ್ರವಾಗಿದೆ. ಬಾಗಲಕೋಟೆ, ಬಿಜೆಪಿಯ ಭದ್ರಕೋಟೆ. ಒಂದು ಸೀಟು ಗೆಲ್ಲದೇ ಇದ್ದಾಗ, ಠೇವಣಿ ಕಳೆದುಕೊಂಡಾಗಲೂ ಬಿಜೆಪಿ ಹೆದರಿಲ್ಲ. ಈಗ ದೇಶದ ಪ್ರಧಾನಿಯೇ ನಮ್ಮ ಕೈಯಲ್ಲಿದ್ದಾರೆ. ನಾವ್ಯಾಕೆ ಹೆದರಬೇಕು ಎಂದರು. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಹೊಟ್ಟೆ ಕಿಚ್ಚಿನಿಂದ ಸೋಲಿಸಿದರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರಿಗೆ ಜನ, ಪಕ್ಷದ ಮೇಲೆ ನಂಬಿಕೆ ಇಲ್ಲ. ಅವರ ನಡವಳಿಕೆಯೇ ಹಾಗೆ. ಮೊನ್ನೆ ಜೆಡಿಎಸ್‌ಗೆ ಟೋಪಿ ಹಾಕಿ ಕಾಂಗ್ರೆಸ್‌ಗೆ ಹೋದ್ರು. ಮತ್ತೂಂದು ಪಕ್ಷದವರು ಕರೆದರೆ ಅಲ್ಲಿಗೂ ಹೋಗುತ್ತಾರೆ. ಅವಕಾಶಕ್ಕೆ ಸಿದ್ದರಾಮಯ್ಯ ಪಲಾಯನ ಮಾಡುತ್ತಾರೆ ಎಂದರು.

ವರುಣಾ ಶಾಸಕ ಯತೀಂದ್ರ, ನನ್ನ ತಂದೆಯೇ ಸಿಎಂ ಎಂದು ಹೇಳುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ತಮ್ಮ ವಂಶದ ಆಸ್ತಿ ಎಂದು ಬಹಳ ಜನ ತಿಳಿದುಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಹೇಳುವುದು ತಪ್ಪು. ಚುನಾವಣೆಯಲ್ಲಿ ಗೆದ್ದ ಬಳಿಕ ಸಿಎಂ ಯಾರು ಎಂದು ಶಾಸಕರು ನಿರ್ಧಾರ ಮಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next