Advertisement

ಗುಲಾಮಗಿರಿ ಸಂಕೇತ ನಶಿಸಿ ಕಾಶಿ, ಮಥುರಾದಲ್ಲೂ ಮಂದಿರ ನಿರ್ಮಾಣವಾಗಲಿ: ಸಚಿವ ಈಶ್ವರಪ್ಪ

04:49 PM Aug 05, 2020 | sudhir |

ಶಿವಮೊಗ್ಗ: ಮುಂದಿನ ದಿನಗಳಲ್ಲಿ ಕಾಶಿ ಹಾಗೂ ಮಥುರಾದಲ್ಲಿ ಕೂಡ ಮಸೀದಿಗಳು ದ್ವಂಸವಾಗಿ ಅಲ್ಲಿಯು ಭವ್ಯ ಮಂದಿರಗಳು ನಿರ್ಮಾಣ ಆಗುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೊಸ ವಿವಾದ ಸೃಷ್ಟಿಸಿದ್ದಾರೆ.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶ್ರದ್ಧಾಕೇಂದ್ರಗಳಾ ದಂತಹ ಅಯೋಧ್ಯೆ, ಕಾಶಿ,ಮಥುರ ಈ ಮೂರು ಶ್ರದ್ಧಾ ಕೇಂದ್ರಗಳಲ್ಲಿ ಒಂದು ರೀತಿಯ ಗುಲಾಮಗಿರಿಯ ಸಂಕೇತವಾಗಿ ಮಸೀದಿಗಳು ಇನ್ನೂ ಇವೆ. ಹಾಗಾಗಿ ಮುಂದಿನ ದಿನಗಳಲ್ಲಿ ಆ ಮಸೀದಿಗಳು ದ್ವಂಸಗಳಾಗಿ ಅಲ್ಲಿಯು ಭವ್ಯ ಮಂದಿರಗಳು ನಿರ್ಮಾಣವಾಗಲಿವೆ ಎನ್ನುವ ಹೊಸ ವಿವಾದ ಸೃಷ್ಟಿಸಿದ್ದಾರೆ.

ಅಯೋಧ್ಯೆಯ ಹೋರಾಟದಲ್ಲಿ ನಾನು ಸಹ ಭಾಗವಹಿಸಿದ್ದೆ. ಲಾಠಿ ಎಟಿನ ಹೊಡೆತ ತಿಂದರೂ ಮಂದಿರ ಅಲ್ಲೇ ನಿರ್ಮಾಣ ಮಾಡುತ್ತೇವೆ ಎನ್ನುವ ಘೋಷವಾಕ್ಯದಂತೆ ಹಾಗೂ ಅನೇಕ ಜನರ ತ್ಯಾಗ ಬಲಿದಾನದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣ ವಾಗುತ್ತಿದೆ.

ಮುಂದಿನ ದಿನಗಳಲ್ಲಿ ಕಾಶಿ ಹಾಗೂ ಮಥುರಾದಲ್ಲಿ ಸಹ ಮಸೀದಿಗಳು ಮುಕ್ತವಾಗಿ ಅಲ್ಲಿಯೂ ಭವ್ಯ ಮಂದಿರ ನಿರ್ಮಾಣ ಆಗುತ್ತದೆ ಎಂದು ಹೊಸ ವಿವಾದ ಸೃಷ್ಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next