Advertisement

ಕೃಷ್ಣಗಿರಿ ಕಾಲೋನಿಯಲ್ಲಿ ಭೀತಿ ಹುಟ್ಟಿಸಿದ್ದ ಹಾವು…ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ

08:17 PM Jan 04, 2023 | Team Udayavani |

ಕುಷ್ಟಗಿ:ಕೃಷ್ಣಗಿರಿ ಕಾಲೋನಿಯಲ್ಲಿ ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಹಾವನ್ನು ಉರಗ ರಕ್ಷಕರ ಸಹಾಯದಿಂದ ಹಿಡಿದು, ಅರಣ್ಯಕ್ಕೆ ಬಿಡಲಾಯಿತು.

Advertisement

ಕೃಷ್ಣಗಿರಿ ಕಾಲೋನಿಯಲ್ಲಿ ಸುಮಾರು ಎರಡು ಮಾರು ಉದ್ದ ಕೇರೆ ಹಾವು, ಗುಂಡು ಕಲ್ಲಿನ ಸಂದಿನಲ್ಲಿ ಠಿಕಾಣಿ ಹೂಡಿದ್ದವು. ಜನರ ನಿಶ್ಯಬ್ದ ಸಂಧರ್ಭದಲ್ಲಿ ಈ ಹಾವು ಆಗಾಗ್ಗೆ ಸಂಚರಿಸಿ ಆತಂಕ ಸೃಷ್ಟಿಸಿತ್ತು. ಈ ಜೋಡಿ ಹಾವುಗಳು ಕಂಡಾಗೊಮ್ಮೆ ಉರಗ ರಕ್ಷಕರನ್ನು ಕರೆಯಿಸಿ, ಶೋಧ ನಡೆಸಿದರೂ ಸಿಕ್ಕಿರಲಿಲ್ಲ. ಬುಧವಾರ ಜೆಸಿಬಿ ತರಿಸಿ ಗುಂಡು ಕಲ್ಲು ಸರಿಸಿದಾಗ ಸುಮಾರು ಎರಡು ಮಾರುದ್ದ ಹಾವನ್ನು ಉರಗ ರಕ್ಷಕ ಮಹಿಬೂಬು ಮದಾರಿ ಹಿಡಿದು, ಅಡವಿ ಪ್ರದೇಶಕ್ಕೆ ಬಿಡಲಾಯಿತು.

ಹಲವು ದಿನಗಳಿಂದ ಜನಸಾಮಾನ್ಯರಿಗೆ ಓಡಾಟಕ್ಕೆ ಭಯ ಸೃಷ್ಟಿಸಿದ್ದ ಹಾವುಗಳನ್ನು ಹಿಡಿದಿರುವುದು ಜನ ನೆಮ್ಮದಿ ನಿಟ್ಟುಸಿರುವ ಬಿಡುವಂತಾಯಿತು. ಹಾವುಗಳ ಕಂಡಲ್ಲಿ ಅದನ್ನು ಸಾಯಿಸದೇ 9901813186 ಸಂಪರ್ಕಿಸುವಂತೆ ಮಹಿಬೂಬು ಮದಾರಿ ತಿಳಿಸಿದ್ದಾರೆ.

ಇದನ್ನೂ ಓದಿ: “ನಾನು ಭಾರತೀಯ ಹಾಗಾಗಿ…’ ವಿಮಾನ ನಿಲ್ದಾಣದಲ್ಲಿನ ವ್ಯಂಗ್ಯಕ್ಕೆ ಸತೀಶ್‌ ಶಾ ಪ್ರತ್ಯುತ್ತರ

Advertisement

Udayavani is now on Telegram. Click here to join our channel and stay updated with the latest news.

Next