Advertisement

“ಈದ್ಗಾ ಮಸೀದಿಯದ್ದೂ ವೀಡಿಯೋ ಸಮೀಕ್ಷೆ ಸಮೀಕ್ಷೆಯಾಗಲಿ’

12:24 AM May 10, 2022 | Team Udayavani |

ಲಕ್ನೋ: ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದದ ನಡುವೆಯೇ ಮಥುರಾದಲ್ಲಿ ಕಾತ್ರ ಕೇಶವ ದೇವ ದೇಗುಲಕ್ಕೆ(ಕೃಷ್ಣ ಜನ್ಮಭೂಮಿ ದೇಗುಲ) ಅಂಟಿಕೊಂಡಂತಿರುವ ಶಾಹಿ ಈದ್ಗಾ ಮಸೀದಿಯ ಒಳಗೂ ವೀಡಿಯೋ ಸಮೀಕ್ಷೆ ನಡೆಸಬೇಕು ಎಂದು ಮಥುರಾ ನ್ಯಾಯಾಲಯಕ್ಕೆ ಪಿಐಎಲ್‌ ಸಲ್ಲಿಸಲಾಗಿದೆ.

Advertisement

17ನೇ ಶತಮಾನದ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು, ಸ್ಥಳಾಂತರಗೊಳಿಸಬೇಕು ಎಂದು ಈಗಾಗಲೇ ಹಲವು ಅರ್ಜಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಸಮೀಕ್ಷೆಗಾಗಿಯೂ ಅರ್ಜಿ ಸಲ್ಲಿಸಲಾಗಿದೆ.

ಕೃಷ್ಣನ ಜನ್ಮಭೂಮಿ ಮಥುರಾದ ದೇಗುಲಕ್ಕೆ 13.37 ಎಕ್ರೆ ಆವರಣವಿದ್ದು, ಅಲ್ಲಿಯೇ ಮುಘಲ್‌ ದೊರೆಗಳು ಅಕ್ರಮವಾಗಿ ಈ ಮಸೀದಿ ನಿರ್ಮಿಸಿದ್ದಾರೆ. ಹಾಗಾಗಿ ಈ ಮಸೀದಿ ತೆರವುಗೊಳಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next