Advertisement

ಕೆಪಿಎಲ್‌: ಟೈಗರ್ ಬಲೆಗೆ ಬಿದ್ದ ಬೆಂಗಳೂರು

07:55 AM Sep 07, 2017 | Team Udayavani |

ಮೈಸೂರು: ನಾಯಕ ವಿನಯ್‌ ಕುಮಾರ್‌(28) ಹಾಗೂ ಪ್ರವೀಣ್‌ ದುಬೆ (ಅಜೇಯ 32) ಅವರ ಜವಾಬ್ದಾರಿಯುತ ಬ್ಯಾಟಿಂಗ್‌, ಅಭಿಷೇಕ್‌ ಸಕುಜಾ ಬಿಗುದಾಳಿ ನೆರವಿನಿಂದ ಹುಬ್ಬಳ್ಳಿ ಟೈಗರ್ ಕೆಪಿಎಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ ವಿರುದ್ಧ 2 ವಿಕೆಟ್‌ನಿಂದ ಜಯ ಸಾಧಿಸಿದೆ.

Advertisement

ಇಲ್ಲಿನ ಮಾನಸಗಂಗೋತ್ರಿಯ ಎಸ್‌ಡಿಎನ್‌ಆರ್‌ ಒಡೆಯರ್‌(ಗ್ಲೆàಡ್ಸ್‌) ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ಬ್ಲಾಸ್ಟರ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 102 ರನ್‌ಗಳಿಸಿತು. ಗುರಿ ಬೆನ್ನು ಹತ್ತಿದ ಹುಬ್ಬಳ್ಳಿ ಟೈಗರ್ 19.1 ಓವರ್‌ಗಳಲ್ಲಿ 8 ವಿಕೆಟ್‌ಗೆ 103 ರನ್‌ ಬಾರಿಸಿ ಗೆಲುವಿನ ನಗೆಬೀರಿತು.

ವಿನಯ್‌-ದುಬೆ ತಾಳ್ಮೆಯ ಆಟ: ಬೆಂಗಳೂರು ತಂಡ ನೀಡಿದ 103 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನುಹತ್ತಿದ ಹುಬ್ಬಳ್ಳಿ ಟೈಗರ್ ಆರಂಭದಲ್ಲಿಯೇ ವೈಫ‌ಲ್ಯ ಎದುರಿಸಿತು. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಸೇರತೊಡಗಿದರು. ಇದರ ಪರಿಣಾಮ ಹುಬ್ಬಳ್ಳಿ ಟೈಗರ್ 34 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ 6ನೇ ವಿಕೆಟ್‌ಗೆ ಜತೆಯಾದ ನಾಯಕ ವಿನಯ್‌ ಕುಮಾರ್‌ ಹಾಗೂ ಪ್ರವೀಣ್‌ ದುಬೆ ತಂಡದ ಮೊತ್ತವನ್ನು 14.3 ಓವರ್‌ಗೆ 79ರನ್‌ಗೆ ತೆಗೆದುಕೊಂಡು ಹೋದರು. ಈ ಹಂತದಲ್ಲಿ ವಿನಯ್‌ ವಿಕೆಟ್‌ ಕಳೆದುಕೊಂಡರು. ಆದರೆ ಈ ಜೋಡಿಯ ದೊಡ್ಡ ಮೊತ್ತದ ಜತೆ ಆಟದಿಂದ ತಂಡ ಗೆಲುವಿನ ದಡ ಸೇರಿತು. ಬೆಂಗಳೂರು ಪರ ಅಭಿಷೇಕ್‌ ಭಟ್‌ 5 ವಿಕೆಟ್‌ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌:
ಬೆಂಗಳೂರು ಬ್ಲಾಸ್ಟರ್ 20 ಓವರ್‌ಗೆ 102/8( ಮಂಜೇಶ್‌ ರೆಡ್ಡಿ 30, ಪವನ್‌ ದೇಶಪಾಂಡೆ 28, ಅಭಿಷೇಕ್‌ ಸಕುಜ 20ಕ್ಕೆ 3), ಹುಬ್ಬಳ್ಳಿ ಟೈಗರ್ 19.1 ಓವರ್‌ಗೆ 103/8( ಪ್ರವೀಣ್‌ ದುಬೆ 32, ವಿನಯ್‌ ಕುಮಾರ್‌ 28, ಅಭಿಷೇಕ್‌ 20ಕ್ಕೆ 5).

– ಸಿ.ದಿನೇಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next