Advertisement

ಕೊಟ್ಟೂರು ಸ್ವಾಮಿ ಮಠದ ಡಾ.ಸಂಗನಬಸವ ಸ್ವಾಮೀಜಿ ಲಿಂಗೈಕ್ಯ

10:40 AM Nov 22, 2021 | Team Udayavani |

ಬಳ್ಳಾರಿ: ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಕೊಟ್ಟೂರು ಸ್ವಾಮಿ ಮಠದ ಡಾ. ಸಂಗನಬಸವ ಸ್ವಾಮೀಜಿ ಭಾನುವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

Advertisement

ಕಳೆದ ಹಲವು ದಿನಗಳಿಂದ ವಯೋಸಹ ಕಾಯಿಲೆಯಿಂದ ಬಳಲುತ್ತಿದ್ದ ಸ್ವಾಮೀಜಿಗಳು ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫಲಕಾರಿಯಾಗದೆ ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

1972 ರಲ್ಲಿ ಬಳ್ಲಾರಿ-ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದ ಅಧಿಕಾರ ವಹಿಸಿಕೊಂಡ ಡಾ.ಸಂಗನಬಸವ ಸ್ವಾಮೀಜಿಗಳು, 1987 ರಲ್ಲಿ ಹಾಲಕೆರೆ ಅನ್ನದಾನೇಶ್ವರ ಮಠದ ಅಧಿಕಾರ‌ ವಹಿಸಿಕೊಂಡರು. ಶಿವಯೋಗ ಮಂದಿರದ ಅಧ್ಯಕ್ಷರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ, ಬಳಿಕ ಆಜೀವ ಅಧ್ಯಕ್ಷರಾದರು. 9 ಬಸವ ಪುರಾಣಗಳ ಪ್ರತಿಪಾದಕರಾಗಿದ್ದ ಶ್ರೀಗಳು, ಈ ಮೂಲಕ ಸರ್ವಧರ್ಮಗಳ ಸಾಮೂಹಿಕ ವಿವಾಹಗಳನ್ನು ನೆರೆವೇರಿಸಿ, ಸಮಾಜದ ಅಭ್ಯುದಯಕ್ಕೆ ಸೇವೆ ಸಲ್ಲಿಸಿದ್ದಾರೆ. ಹರಿಜನ-ಗಿರಿಜನ ಓಣಿಗಳಲ್ಲಿ ಪಾದಯಾತ್ರೆ ನಡೆಸಿ ಮನೆ ಮನೆಗೆ ಪ್ರಸಾದ ವಿತರಿಸಿದರು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ 9 ಮಠಗಳಲ್ಲಿ ನಿರಂತರವಾಗಿ ಶಿವಾನುಭವಗೋಷ್ಠಿ ರೂಪಿಸಿದ್ದರು. ಹೀಗೆ ಸಾಮಾಜದ ಬಗ್ಗೆ ಕಳಕಳಿ ಹೊಂದಿದ್ದ ಶ್ರೀಗಳು ಹಲವಾರು ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಸ್ವಾಮೀಜಿಗಳು, ಭಾನುವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

ಶ್ರೀಗಳ ಹಿನ್ನೆಲೆ;

ಜಮಖಂಡಿ ತಾಲೂಕಿನ ಬಿದರೆ ಗ್ರಾಮದ ಸ್ವತಂತ್ರ ಮಠದ ಶ್ರೀ ಬಸವಲಿಂಗಯ್ಯ, ಗುರಮ್ಮ ದಂಪತಿಗಳಿಗೆ 1938 ರಲ್ಲಿ ಜನಿಸಿದರು. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಸಂಗನಬಸವ ಶ್ರೀಗಳು, ಬೈಲಹೊಂಗಲದ ಕುಂಬಾರಗೇರಿ ಮಠದ ಶಿವಬಸಯ್ಯನವರ ಆಶ್ರಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದರು. ಕೆಲದಿನ ಅನ್ನದಾನೀಶ್ವರ ಮಠದಲ್ಲಿಯೂ ಓದಿದ್ದರು. ಶ್ರೀಗಳ ತಂದೆ ಬಸವಲಿಂಗಯ್ಯನವರು ಸಂಗನಬಸವರು ಬಾಲಕರಾಗಿದ್ದಾಗ ಒಮ್ಮೆ ಹಾವೇರಿಯ ಮಹಾತಪಸ್ವಿ ಶಿವನಸವ ಸ್ವಾಮಿಗಳ ದರ್ಶನಕ್ಕೆ ಕರೆದೊಯ್ದಿದ್ದರಂತೆ. ಬಾಲಕನ ಲಕ್ಷಣಗಳನ್ನು ನೋಡಿದ್ದ ಸ್ವಾಮೀಜಿಗಳು, ದಯಾದೃಷ್ಟಿ ಬೀರಿ, ತಲೆಯ ಮೇಲೆ ಹಸ್ತವನ್ನಿಟ್ಟು, ಸಂತೋಷದಿಂದ ಹರಿಸಿದರಂತೆ. ಇದು ಸಂಗನಬಸವ ಸ್ವಾಮಿಗಳ ಭವಿಷ್ಯದ ಸಂಕೇತವಾಗಿದ್ದು, ಮುಂದೆ ಮಗನಬಸವರನ್ನು ಜಮಖಂಡಿ ವಿರಕ್ತ ಮಠಕ್ಕೆ ನೇಮಿಸಿ ಮುಂದಿನ ಅಭ್ಯಾಸಕ್ಕೆ ಶಿವಯೋಗ ಮಂದಿರಕ್ಕೆ ಸೇರಿಸಲಾಯಿತು ಎಂದು ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿದೆ.

Advertisement

ಬಳಿಕ 12 ವರ್ಷಗಳ ಕಾಲ ಶಿವಯೋಗ ಮಂದಿರದಲ್ಲಿದ್ದು ಒಬ್ಬ ಆದರ್ಶ ಸ್ವಾಮಿಗಿರಬೇಕಾದ ಎಲ್ಲವನ್ನು ಕರಗತ ಮಾಡಿಕೊಂಡರು. ಶಿವಯೋಗ ಸಾಧನೆಗೆ ತಮ್ಮನ್ನು ಪರಿಪೂರ್ಣವಾಗಿ ಒಪ್ಪಿಕೊಂಡರು. ಕನ್ನಡ, ಇಂಗ್ಲೀಷ್, ಸಂಸ್ಕೃತ ಭಾಷೆಗಳ ಜತೆಗೆ ಹಿಂದಿ ಭಾಷೆಯನ್ನು ಸಹ ಕಲಿತು ಕರಗತ ಮಾಡಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next