Advertisement

‘ಕೋಟಿಗೊಬ್ಬ-3’ ಪೊಸ್ಟರ್ ಡಿಸೈನರ್‍ ಸಾಯಿ ಕೃಷ್ಣನನ್ನು ಕೈಬಿಟ್ಟ ನಿರ್ಮಾಣ ಸಂಸ್ಥೆ  

06:29 PM Apr 13, 2021 | Team Udayavani |

ಬೆಂಗಳುರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾಗಳ ಪೋಸ್ಟರ್ ಡಿಸೈನ್ ಮಾಡುತ್ತಿದ್ದ ಸಾಯಿ ಕೃಷ್ಣ ಅವರನ್ನು ಕೋಟಿಗೊಬ್ಬ 3 ಚಿತ್ರತಂಡ ಕೈ ಬಿಟ್ಟಿದೆ.

Advertisement

ಇಂದು ಈ ಬಗ್ಗೆ ಟ್ವಿಟರ್‍ ನಲ್ಲಿ ಅಸಮಾಧಾನ ಹೊರಹಾಕಿರುವ ಸಾಯಿ ಕೃಷ್ಣ, ಕಾರಣ ಕೊಡದೆ ‘ಕೋಟಿಗೊಬ್ಬ 3’ ನಿರ್ಮಾಣ ಸಂಸ್ಥೆ ನನ್ನನ್ನು ಹೊರಹಾಕಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೂ ಈ ಚಿತ್ರವನ್ನು ಅವರು ಒಪ್ಪಿಕೊಳ್ಳಲು ಮುಖ್ಯವಾಗಿ ಸುದೀಪ್ ಹಾಗೂ ಅವರ ಅಭಿಮಾನಿಗಳು ಮತ್ತು ಹಣ. ಇವುಗಳನ್ನು ಬಿಟ್ಟು ಇನ್ಯಾರು ಅಲ್ಲ ಎಂದು ಟ್ವಿಟ್ಟಿಸಿದ್ದಾರೆ.

ಸುದೀಪ್ ಅವರ ಅಭಿಮಾನಿಗಳಿಗೆ ಕ್ಷಮೆ ಕೋರಿರುವ ಸಾಯಿ ಕೃಷ್ಣ, ಇಂದಿನಿಂದ ನಾನು ಕೋಟಿಗೊಬ್ಬ-3 ಚಿತ್ರದ ಆಫೀಸಿಯಲ್ ಪೋಸ್ಟರ್ ಡಿಸೈನರ್ ಅಲ್ಲ ಎಂದಿದ್ದಾರೆ.

ಸಾಯಿ ಕೃಷ್ಣ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಅವರು, ಕೋಟಿಗೊಬ್ಬ-3 ಚಿತ್ರತಂಡದ ಜತೆಗೆ ಇಲ್ಲಿಯವರೆಗೆ ಜೊತೆಯಾಗಿದ್ದಿರಿ. ಈ ಸಿನಿಮಾ ಮುಗಿಯುವರೆಗೆ ನಿಮ್ಮ ಪ್ರಯಾಣ ಮುಂದುವರೆಯಬೇಕೆಂದು ನಾನು ಬಯಸುತ್ತೇನೆ. ಇಂದಿನ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಸದ್ಯ ನೀವು ಹೊರಹಾಕಿರುವ ವಿಷಯದ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಸಾಯಿ ಕೃಷ್ಣ ಅವರು ಸುದೀಪ್ ಅವರ ಕೆಂಪೇಗೌಡ,ವಿಷ್ಣುವರ್ಧನ ಹಾಗೂ ವರದನಾಯಕ ಸೇರಿದಂತೆ ಹಲವು ಸಿನಿಮಾಗಳ ಅದ್ಭುತ ಪೋಸ್ಟರ್‍ ಗಳನ್ನು ಡಿಸೈನ್ ಮಾಡಿದ್ದಾರೆ. ಇದೀಗ ಅವರು ಕೋಟಿಗೊಬ್ಬ 3 ಚಿತ್ರದಿಂದ ಹೊರಬಂದಿರುವುದಕ್ಕೆ ಸುದೀಪ್ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next