Advertisement
ಬದಲಾವಣೆಗೆ ಕಸರತ್ತು:ಕಳೆದ ಡಿ.14ರಂದು ಕಮ್ಮಸಂದ್ರದ ಶ್ರೀಕೋಟಿ ಲಿಂಗೇಶ್ವರ ದೇಗುಲದ ಧರ್ಮಾಧಿಕಾರಿ ಶ್ರೀ ಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿಗಳು ಲಿಂಗೈಕ್ಯರಾಗಿ ದ್ದರು. ದೇಗುಲದ ಸಮಸ್ತ ಆಸ್ತಿಯನ್ನು 2002ರಲ್ಲಿ ರಾಜ್ಯಪಾಲರಿಗೆಹಾಗೂ 2004ರಲ್ಲಿ ದೇಗುಲದ ಕಾರ್ಯದರ್ಶಿ ಕೆ.ವಿ.ಕುಮಾರಿ ಉತ್ತರಾಧಿಕಾರಿಯಗಿ ಕೆಲಸ ಮಾಡಲು ವಿಲ್ ಬರೆದಿದ್ದರೂ ಇದನ್ನು ಲೆಕ್ಕಿಸದೇ ಶ್ರೀಗಳ ಪುತ್ರ ಶಿವಪ್ರಸಾದ್ ತನ್ನ ಹೆಸರಿಗೆ ಆಸ್ತಿ ಖಾತೆ ದಲಾವಣೆಮಾಡಿಕೊಳ್ಳಲು ವಿವಿಧ ಕಸರತ್ತು ನಡೆಸಿದ್ದಾರೆ.
Related Articles
Advertisement
ಶ್ರೀಗಳು ಲಿಂಗೈಕ್ಯರಾದ ನಂತರ ವಿಲ್ನಲ್ಲಿ ಬರೆದಿರುವಂತೆ ದೇಗುಲದ ಎಲ್ಲಾ ಆಸ್ತಿಗಳನ್ನು ಶ್ರೀಕೋಟಿಲಿಂಗೇಶ್ವರ ದೇಗುಲದ ಹೆಸರಿಗೆ ಖಾತೆ ಬದಲಾವಣೆ ಮಾಡಬೇಕಾಗಿರುವುದರಿಂದ ಮತ್ಯಾರೂ ಹೆಸರಿಗೂ ಬದಲಾವಣೆ ಮಾಡಬಾರದೆಂದು ಒಂದು ತಿಂಗಳ ಹಿಂದೆಯೇ ಕಾರ್ಯದರ್ಶಿ ಕೆ.ವಿ.ಕುಮಾರಿ ದೂರು ನೀಡಿದ್ದರೂ ಕಂದಾಯ ಇಲಾಖೆ ಬದಲಾವಣೆಗೆ ಕೈಹಾಕಿದ್ದಾರೆಂದು ಹೇಳಲಾಗಿದೆ. ಶ್ರೀಗಳ ಪುತ್ರ ಡಾ.ಶಿವಪ್ರಸಾದ್ ಯಾರಿಗೂ ಗೊತ್ತಿಲ್ಲದೇ ಮಧ್ಯರಾತ್ರಿ ದೇಗುಲದ ಹುಂಡಿ ಹೊಡೆದುಹಣ ತೆಗೆದುಕೊಂಡಿದ್ದಾರೆ. ದೇಗುಲದ ಅತಿಥಿ ಗೃಹದಲ್ಲಿ ಕುಟುಂಬ ಸಮೇತವಾಗಿ ಬಂದು ಪ್ರತಿನಿತ್ಯ ಅಂಗಡಿಗಳಿಂದ ಬರುವ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈ ವಿವಾದಕ್ಕೆಲ್ಲಾ ಕೆಲವು ರಾಜಕೀಯ ಎದುರಾಳಿಗಳ ಕೈಚಳಕವೇ ಕಾರಣ ಎನ್ನಲಾಗಿದ್ದು, ಇದಕ್ಕೆಲ್ಲಾ ಪರಿಹಾರವಾಗಿ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸುವುದೇ ಜಿಲ್ಲಾಡಳಿತಕ್ಕೆ ಮುಂದಿನ ಅಸ್ತ್ರವಾಗ ಲಿದೆಯೇ ಎಂಬುದನ್ನು ಕಾದುನೋಡಬೇಕಿದೆ
ಖಾತೆ ಬದಲಾವಣೆ ತಡೆದು ವಿಚಾರಣೆ ನಡೆಸುವೆವು ಬೇತಮಂಗಲ ಹೋಬಳಿ ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇಗುಲದ ಆಸ್ತಿ ಸಾಂಭವಶಿವಮೂರ್ತಿ ಶ್ರೀಗಳ ಹೆಸರಿನಲ್ಲಿರುವುದರಿಂದ ಶ್ರೀಗಳ ಪುತ್ರ ಡಾ.ಕೆ.ಶಿವಪ್ರಸಾದ್ ಅವರು ತನ್ನ ಹೆಸರಿಗೆ ಫವತಿವಾರಸು ಖಾತೆ ಮಾಡುವಂತೆ ಭೂಮಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ 30 ದಿನ ನೋಟಿಸ್ ಅವಧಿಯಲ್ಲಿರಲಿದೆ. ಇದರ ಮಧ್ಯೆ ದೇಗುಲದ ಉತ್ತರಾಧಿಕಾರಿ ಕೆ.ವಿ.ಕುಮಾರಿ ತನ್ನ ಹೆಸರಿಗೆ ವಿಲ್ ಬರೆದಿದ್ದಾರೆಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆ ಈ ಅರ್ಜಿಯನ್ನೂ ಸ್ವೀಕರಿಸಿದ್ದು ವಿವಾದಿತ ಪ್ರಕರಣ ಆಗಿರುವುದರಿಂದ ಕೇಸು ನಡೆಸಲಾಗುವುದು. ಸದ್ಯಕ್ಕೆ ಖಾತೆ ಬದಲಾವಣೆಯನ್ನು ತಡೆದು ವಿಚಾರಣೆ ನಡೆಸಲಾಗುವುದು ಎಂದು ಕೆಜಿಎಫ್ ತಹಶೀಲ್ದಾರ್ ಕೆ.ರಮೇಶ್ ತಿಳಿಸಿದ್ದಾರೆ.