Advertisement

ಕೋಟೇಶ್ವರ –ಹಾಲಾಡಿ ಮಾರ್ಗ: ಬೃಹತ್‌ ಮರ ಬಿದ್ದು ಸಂಚಾರಕ್ಕೆ ಅಡ್ಡಿ

11:32 PM May 21, 2022 | Team Udayavani |

ಕುಂದಾಪುರ: ಕೋಟೇಶ್ವರ – ಹಾಲಾಡಿ ಮಾರ್ಗದ ಗುಡ್ಡೆಯಂಗಡಿ ಬಳಿ ಶನಿವಾರ ಬೆಳಗ್ಗೆ 9ರ ಸುಮಾರಿಗೆ ಬೃಹತ್‌ ಗಾತ್ರದ ಮರವೊಂದು ರಸ್ತೆಗೆ ಉರುಳಿದ ಕಾರಣ 1 ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

Advertisement

ಕುಂದಾಪುರದಿಂದ ಹಾಲಾಡಿ, ಹೆಬ್ರಿ, ಆಗುಂಬೆ, ಅಮಾಸೆಬೈಲು, ತೀರ್ಥಹಳ್ಳಿ ಕಡೆ ಬಸ್‌ಗಳಿಗೆ, ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳುವವರಿಗೆ ಅಡ್ಡಿಯಾಯಿತು. ಕೆಲವರು ಪರ್ಯಾಯ ಮಾರ್ಗ ಬಳಸಿದರು. ಅಲ್ಲಿ ರಸ್ತೆ ವಿಸ್ತರಣೆ ವೇಳೆ ಮರದ ಬುಡದ ವರೆಗೆ ಅಗೆಯಲಾಗಿತ್ತು. ನಿರಂತರ ಮಳೆಯ ಕಾರಣ ಮಣ್ಣು ಮೃದುವಾಗಿ ಮರ ಉರುಳಿದೆ. ಅರಣ್ಯ ಇಲಾಖೆ ಸಿಬಂದಿ ಹಾಗೂ ಸ್ಥಳೀಯರು ಮರವನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next