Advertisement

ಸಾಲ ಕಂತು ಪಾವತಿಗೆ ಕೃಷಿಕರಿಗೆ ನೋಟಿಸ್‌ : ಅವಧಿ ವಿಸ್ತರಿಸುವಂತೆ ಸಿಎಂ ಗೆ ಸಚಿವ ಕೋಟ ಮನವಿ

06:35 PM May 10, 2021 | Team Udayavani |

ಪುತ್ತೂರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿಗೆ ಪಡೆದ ಸಾಲದ ಕಂತು ಪಾವತಿಸುವಂತೆ ಕೃಷಿಕರಿಗೆ ನೋಟಿಸ್‌ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಸಾಲದ ಕಂತು ತುಂಬುವ ಅವಧಿಯನ್ನು ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇನೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

“ಲಾಕ್‌ಡೌನ್‌ ಸಂಕಷ್ಟ : ಅವಧಿ ವಿಸ್ತರಣೆಗೆ ಆಗ್ರಹ” ಶೀರ್ಷಿಕೆಯಡಿ ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಉಂಟಾಗಿರುವ ಈ ಸಂದರ್ಭದಲ್ಲಿ ಕೃಷಿಕರಿಗೆ ಸಾಲ ಕಂತು ಮರುಪಾವತಿಗೆ ನೋಟಿಸ್‌ ಜಾರಿಯಾಗಿರುವ ಬಗ್ಗೆ ಮೇ 9 ರಂದು ಉದಯವಾಣಿ ವರದಿ ಪ್ರಕಟಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಮೇ 11 ರಂದು ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ. ಕಂತು ತುಂಬುವ ಅವಧಿಯನ್ನು ಆರು ತಿಂಗಳ ತನಕ ವಿಸ್ತರಣೆ ಮಾಡಲು ಮನವಿ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ :ಶಿಕಾರಿಪುರ : ಮುಸ್ಲಿಂ ಯುವಕರಿಂದ ಕೋವಿಡ್ ನಿಂದ ಮೃತಪಟ್ಟ ಹಿಂದೂ ಮಹಿಳೆಯ ಅಂತ್ಯಕ್ರಿಯೆ..!

Advertisement

Udayavani is now on Telegram. Click here to join our channel and stay updated with the latest news.

Next