Advertisement

ಕೋಟ: ಸ್ಕೂಟರ್‌ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಬೇಕರಿ ಕಾರ್ಮಿಕ ಸಾವು

11:10 PM Mar 04, 2023 | Team Udayavani |

ಕೋಟ: ಬೈಕ್‌ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಬೇಕರಿ ಕಾರ್ಮಿಕ ಮೃತಪಟ್ಟ ಘಟನೆ ಸಾಸ್ತಾನದಲ್ಲಿ ಮಾ. 3ರಂದು ಸಂಭವಿಸಿದೆ.

Advertisement

ಕುಂದಾಪುರ ತಾಲೂಕು ಹಕ್ಲಾಡಿ ನಿವಾಸಿ ನಾರಾಯಣ (65) ಮೃತ ವ್ಯಕ್ತಿ.

ಇವರು ಸಾಸ್ತಾನದ ಬೇಕರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು, ಬೇಕರಿ ತಿನಿಸುಗಳ ತಯಾರಿಕೆ ಸಾಮಾಗ್ರಿ ಖರೀದಿಗಾಗಿ ರಸ್ತೆ ದಾಟುತ್ತಿದ್ದ ಸಂದರ್ಭ ಕುಂದಾಪುರದಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಬೈಕ್‌ ಢಿಕ್ಕಿಯಾಗಿದ್ದು ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾರೆ. ಮೃತರು ಪತ್ನಿ,ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸ್ಥಳೀಯ ನಿವಾಸಿ ಬೈಕ್‌ ಸವಾರ ಅತುಲ್‌ ಕೂಡ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next