Advertisement

ಕಟಾವು ಯಂತ್ರ ತೆರಳಲು ಅಡ್ಡಿ; ದೂರು-ಪ್ರತಿದೂರು

12:44 AM Nov 10, 2022 | Team Udayavani |

ಕೋಟ: ಕಟಾವು ಯಂತ್ರ ಗದ್ದೆಗೆ ತೆರಳಲು ಅಡ್ಡಿಪಡಿಸಿದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ, ಹಲ್ಲೆ ನಡೆದು ದೂರು- ಪ್ರತಿದೂರು ದಾಖಲಾದ ಘಟನೆ ಅಚ್ಲಾಡಿಯಲ್ಲಿ ನ.7ರಂದು ಸಂಭವಿಸಿದೆ.

Advertisement

ಇಲ್ಲಿನ ಮಕ್ಕಿಮನೆ ನಿವಾಸಿ ಸಂಪಾವತಿ ಶೆಡ್ತಿ (62), ಇವರ ಮನೆಯ ಗದ್ದೆಯ ಕಟಾವು ಮಾಡಲು ಯಂತ್ರ ಬಂದಾಗ ಪಕ್ಕದ ಮನೆಯ ಚಂದ್ರ ಹಾಗೂ ಲತಾರವರು ಸಂಪಾವತಿಯವರ ಗದ್ದೆ ಯಲ್ಲಿ ಭತ್ತವನ್ನು ಕೊಂಡೊಯ್ಯಲು ದಾರಿ ಕೇಳಿದ್ದು, ಗದ್ದೆಯ ಬದಿಯಲ್ಲಿ ಹೋಗಲು ಒಪ್ಪಿಗೆ ಕೊಟ್ಟಿರುತ್ತಾರೆ. ಆದರೆ ಆಸುಪಾಸು ಮನೆಯವರು ಗದ್ದೆಯ ಮಧ್ಯದಲ್ಲಿ ದಾರಿ ಬೇಕು ಎಂದು ಕೇಳಿದಾಗ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಸುಶೀಲ ,ಶಾಂತ ಹಾಗೂ ಸಾಕು ಎನ್ನುವವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು
ಅಚ್ಲಾಡಿ ಮಕ್ಕಿಮನೆ ನಿವಾಸಿ ಸುಶೀಲಾ ಶೆಡ್ತಿ (67) ಇವರ ಮಾವನ ಮನೆಯ ಗದ್ದೆ ಕಟಾವಿಗೆ ಯಂತ್ರ ನೆರೆಮೆನೆಯ ಸಂಪಾ ಶೆಡ್ತಿಯವರ ಗದ್ದೆಯ ಮುಖಾಂತರ ಹೋದಾಗ ಸಂಪಾ ಅವರು ಹಾಗೂ ಅವರ ಗಂಡ ಕಾಳು ಶೆಟ್ಟಿಯವರು ಸುಶೀಲ ಶೆಡ್ತಿ ಹಾಗೂ ಅವರ ತಂಗಿ ಸಾಕು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next