Advertisement

ಕೋಟ: ಜಾಗದ ತಕರಾರಿಗೆ ಹಲ್ಲೆ: ದೂರು-ಪ್ರತಿದೂರು

07:02 PM Nov 24, 2022 | Team Udayavani |

ಕೋಟ: ಗಿಳಿಯಾರು ಗ್ರಾಮದ ನಿವಾಸಿ ವಿಜಯ (49) ಅವರು ನ.21ರಂದು ತನ್ನ ತಂದೆಯವರ ಉಳ್ತೂರಿನಲ್ಲಿರುವ ಜಮೀನಿನಲ್ಲಿ  ಜೆ.ಸಿ.ಬಿ. ಮೂಲಕ ಕೆಲಸ ಮಾಡಿಸುತ್ತಿರುವಾಗ ಕೆದೂರು ನಿವಾಸಿ ಸುರೇಂದ್ರ ಹೆಗ್ಡೆ  ಮತ್ತು ಆತನ  ಮಗ ಹಾಗೂ ಇತರರನ್ನು ಒಟ್ಟುಗೂಡಿಸಿಕೊಂಡು  ಇದು ನಮ್ಮ ಪಟ್ಟಾ ಸ್ಥಳ ಇಲ್ಲಿ  ನಿನಗೇನು ಕೆಲಸ ಎಂದು ಹಲ್ಲೆ ಹಾಗೂ ದಲಿತ ದೌರ್ಜನ್ಯ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

ಪ್ರತಿದೂರು :-

ಕೆದೂರು ನಿವಾಸಿ  ಸುರೇಂದ್ರ ಹೆಗ್ಡೆ (63) ಅವರು ಉಳೂ¤ರಿನ ತನ್ನ ಸ್ವಂತ ಕ್ರಯದ  ಹಕ್ಕಿನ ಸ್ಥಿರಾಸ್ತಿಯಲ್ಲಿ ಕಟ್ಟಡ ಕಾಮಗಾರಿ ಮಾಡಲು ಬಾಡಿಗೆ ಜೆ.ಸಿ.ಬಿ ತಂದು  ಕೆಲಸ ಮಾಡಿಕೊಂಡಿರುವಾಗ  ವಿಜಯ  ಎನ್ನುವವರು  ಸ್ಥಳಕ್ಕೆ  ಬಂದು ಅವಾಚ್ಯ ಶಬ್ದಗಳಿಂದ ಬೆ„ದಿದ್ದು, ಸುರೇಂದ್ರ ಹೆಗ್ಡೆಯವರ ಮಗ ವಿವೇಕ ಹೆಗ್ಡೆಯವರಿಗೂ ಅವಾಚ್ಯವಾಗಿ ಬೆ„ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ.

ದಲಿತ ಸಂಘಟನೆಗಳಿಂದ ಠಾಣೆಗೆ ಮನವಿ:-

ಕೆದೂರು ಸುರೇಂದ್ರ ಹೆಗ್ಡೆ ಅವರೇ ವಿಜಯ್‌ ಅವರಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದು,ಅನಂತರ ಹಲ್ಲೆಗೊಳಗಾದವರ ವಿರುದ್ಧವೇ ದೂರು ದಾಖಲಿಸಿದ್ದಾರೆ. ಪೊಲೀಸರು ಈ ರೀತಿ ದೂರನ್ನು ದಾಖಲಿಸಿಕೊಳ್ಳಬಾರದಿತ್ತು ಹಾಗೂ ಆರೋಪಿಯನ್ನು ತತ್‌ಕ್ಷಣ ಬಂಧಿಸಬೇಕು ಎಂದು ವಿವಿಧ ದಲಿತ ಸಂಘಟನೆಯ  ಮುಖಂಡರು ಬುಧವಾರ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಕೋಟ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಠಾಣಾಧಿಕಾರಿ ಮಧು ಬಿ. ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯವರ ಜತೆ ಮಾತನಾಡಿದ ಠಾಣಾಧಿಕಾರಿಗಳು, ಎರಡೂ ದೂರುಗಳನ್ನು ಕಾನೂನು ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ ಹಾಗೂ ವಿಜಯ್‌ ಅವರ ವಿರುದ್ಧ ದೌರ್ಜನ್ಯ ನಡೆಸಿದ  ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದರು.

Advertisement

ದಲಿತ ಸಂಘಟನೆಯ ಮುಖಂಡರಾದ ಶ್ಯಾಮ್‌ರಾಜ್‌ ಬಿರ್ತಿ, ಶ್ಯಾಮ್‌ಸುಂದರ್‌ ತೆಕ್ಕಟ್ಟೆ, ಪರಮೇಶ್ವರ ಉಪ್ಪೂರು, ಭಾಸ್ಕರ್‌ ಮಾಸ್ತರ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next