Advertisement

Kota; ಬೈಕ್‌ ಮುಖಾಮುಖಿ ಢಿಕ್ಕಿ: ಸವಾರರು ಗಂಭೀರ

12:23 AM Feb 20, 2024 | Team Udayavani |

ಕೋಟ: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಫೆ. 19ರಂದು ಸಾೖಬ್ರಕಟ್ಟೆ ಸಮೀಪ ಶಿರ್ಣಿ ತಿರುವಿನಲ್ಲಿ ನಡೆದಿದೆ.

Advertisement

ಸಾೖಬ್ರಕಟ್ಟೆ ನಿವಾಸಿ ಉದ್ಯಮಿ ಜಗದೀಶ್‌ ಹೆಗ್ಡೆ (54) ಹಾಗೂ ಕೊಪ್ಪಳ ನಿವಾಸಿ ಕಾರ್ಮಿಕ ಭೀಮಪ್ಪ ಲಂಬಾಣಿ (48) ಗಾಯಗೊಂಡವರು.

ಜಗದೀಶ್‌ ಅವರು ಸಾೖಬ್ರಕಟ್ಟೆಯಿಂದ ಕೋಟ ಕಡೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಕೋಟ ಕಡೆಯಿಂದ ಸಾೖಬ್ರಕಟ್ಟೆ ಕಡೆಗೆ ಸಂಚರಿಸುತ್ತಿದ್ದ ಭೀಮ್ಮಪ್ಪ ಅವರ ಬೈಕ್‌ ಎದುರಿನಿಂದ ಢಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡರು.

ಅವರನ್ನು ಸ್ಥಳೀಯರು ಹಾಗೂ ಜೀವನ್‌ಮಿತ್ರ ನಾಗರಾಜ್‌ ಪುತ್ರನ್‌ ಸಹಕಾರದಲ್ಲಿ ತತ್‌ಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಲಾರಿ ಹರಿದು ಮೆಕ್ಯಾನಿಕ್‌ ಗಂಭೀರ
ಕುಂದಾಪುರ: ಲಾರಿ ದುರಸ್ತಿಯ ಬಳಿಕ ಚಾಲಕ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಮೆಕ್ಯಾನಿಕ್‌ ಶ್ರೀಕಾಂತ್‌ ಗಂಭೀರ ಗಾಯಗೊಂಡಿದ್ದಾರೆ. ಅವರು ಗೂಡ್ಸ್‌ ಲಾರಿಯ ದುರಸ್ತಿ ಮಾಡಿ ಚಾಲಕ ಸರ್ಫರಾಜ್ ಬಳಿ ಲಾರಿಯನ್ನು ಸ್ವಲ್ಪ ಹಿಂದಕ್ಕೆ ಚಲಾಯಿಸುವಂತೆ ಹೇಳಿದಾಗ ಲಾರಿಯ ಚಕ್ರ ಅವರ ಪಾದದ ಮೇಲೆ ಹರಿಯಿತು. ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದೆ.

Advertisement

ಬೈಕ್‌ಗಳೆರಡು ಢಿಕ್ಕಿ: ಗಾಯ
ಕುಂದಾಪುರ: ಕೋಟೇಶ್ವರ ಗ್ರಾಮದ ಕಿನಾರಾ ಬೀಚ್‌ ಕಡೆಗೆ ಹೋಗುವ ರಸ್ತೆಯಲ್ಲಿ ಬೈಕ್‌ಗಳೆರಡು ಢಿಕ್ಕಿಯಾಗಿ ಸವಾರ ಸತೀಶ್‌ ಮಡಿವಾಳ (48) ಗಾಯಗೊಂಡ ಘಟನೆ ಫೆ. 18ರ ಸಂಜೆ ಸಂಭವಿಸಿದೆ. ಸತೀಶ ಅವರನ್ನು ಕೋಟೇ ಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಬೈಕ್‌ ಸವಾರ ನಿಸರ್ಗ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next