Advertisement

ಕೊರಟಗೆರೆ: ಓವರ್ ಟೇಕ್ ವೇಳೆ ಅವಘಡ ;ದ್ವಿಚಕ್ರ ವಾಹನ ಸವಾರ ಸಾವು

07:34 PM Sep 08, 2022 | Team Udayavani |

ಕೊರಟಗೆರೆ: ದ್ವಿಚಕ್ರ ವಾಹನ ಸವಾರನೋರ್ವ ವಾಹನವೊಂದನ್ನು ಓವರ್ ಟೇಕ್ ಮಾಡುವ ವೇಳೆ ಮುಂಭಾಗದಿಂದ ಬರುತ್ತಿದ್ದ ವಾಹನವನ್ನು ತಪ್ಪಿಸಿಕೊಳ್ಳಲು ಹೋಗಿ ಮತ್ತೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ಘಟನೆ ಗುರುವಾರ ನಡೆದಿದೆ.

Advertisement

ತಾಲೂಕಿನ ತುಂಬಾಡಿ ದೊಡ್ಡ ಸೇತುವೆ ಬಳಿ ಈ ದುರ್ಘಟನೆ ಜರುಗಿದ್ದು, ಕುರುಡಗಾನಹಳ್ಳಿ ಗ್ರಾಮದ ಮೋಹನ್ ಕುಮಾರ್(23) ಸಾವಿಗೀಡಾದ ದುರ್ದೈವಿ.

ಮೃತ ಮೋಹನ್ ಕುಮಾರ್ ಕೊರಟಗೆರೆ ಕಡೆಯಿಂದ ತುಂಬಾಡಿ ಕಡೆ ದ್ವಿಚಕ್ರ ವಾಹನದಲ್ಲಿ ಬರುವಾಗ ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಮುಂದಿನಿಂದ ಬರುತ್ತಿದ್ದ ಮತ್ತೊಂದು ವಾಹನದಿಂದ ತಪ್ಪಿಸಿಕೊಳ್ಳಲು ಎಡಗಡೆ ಹೋಗುತ್ತಿದ್ದ ಆಂಬುಲೆನ್ಸ್ ಡ್ರೈವರ್ ಮುದ್ದಯ್ಯ ಅವರ ದ್ವಿಚಕ್ರ ವಾಹನದ ಚಕ್ರ ವಾಹನಕ್ಕೆ ಗುದ್ದಿ ರಸ್ತೆ ಪಕ್ಕದ ಸೇಫ್ ಪೋಲ್ ಗೆ ಹೊಡೆದು ತೀವ್ರ ಪೆಟ್ಟಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಮುದ್ದಯ್ಯ ಅವರ ಬಲ ಮೊಣಕಾಲಿಗೆ ಪೆಟ್ಟಾಗಿದ್ದು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಕೆ. ಸುರೇಶ್ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next