Advertisement

Koratagere: 15 ಮಂದಿಯ ಮೇಲೆ ಹುಚ್ಚುನಾಯಿ ದಾಳಿ: ಬೆಚ್ಚಿಬಿದ್ದ ಜನತೆ

09:24 PM Mar 10, 2024 | Team Udayavani |

ಕೊರಟಗೆರೆ: ರಸ್ತೆಬದಿಯ ಅಂಗಡಿಗಳ ಮುಂದೆ ಕುಳಿತ್ತಿದ್ದ 15 ಮಂದಿ ಸಾರ್ವಜನಿಕರ ಮೇಲೆ ಹುಚ್ಚುನಾಯಿ ದಿಢೀರ್ ದಾಳಿ ನಡೆಸಿದ್ದು ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದಾರೆ.

Advertisement

ಕೊರಟಗೆರೆ ಪಟ್ಟಣದ 1, 2, 3 ಮತ್ತು 9ನೇ ವಾರ್ಡಿನಲ್ಲಿ ಹುಚ್ಚುನಾಯಿ ಕಂಡಕಂಡವರ ಮೇಲೆ ಅಟ್ಟಾಡಿಸಿಕೊಂಡು ದಾಳಿ ನಡೆಸಿದೆ.

ನಾಯಿಯ ದಾಳಿಯಿಂದ ನರಸಪ್ಪ, ರಾಜಶೇಖರ್, ವೆಂಕಟೇಶ್, ನರಸಯ್ಯ, ಪ್ರಕಾಶ್, ನಾಗರಾಜು, ಮಾನಸ, ವೀರಭದ್ರಯ್ಯನಿಗೆ ಗಂಭೀರ ಗಾಯಗಳಾಗಿ ಕೊರಟಗೆರೆ ಮತ್ತು ತುಮಕೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15ಜನರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿಯನ್ನು ಪಪಂಆರೋಗ್ಯ ಇಲಾಖೆ ಸೆರೆ ಹಿಡಿದಿದ್ದಾರೆ.

400ಕ್ಕೂ ಅಧಿಕ ಬೀದಿನಾಯಿ
ಕೊರಟಗೆರೆ ಪಟ್ಟಣದ 15ವಾರ್ಡಿನಲ್ಲಿ 450ಕ್ಕೂ ಅಧಿಕ ಬೀದಿನಾಯಿಗಳಿವೆ. ಮಟನ್ ಮಾರ್ಕೆಟ್, ರೇಣುಕಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಅಂಚೆಕಚೇರಿ, ಕದಂಬಬಾರ್, ಕಾಳಿದಾಸ ಶಾಲೆ, ಊರ್ಡಿಗೆರೆ ಕ್ರಾಸ್, ಕಾಲೇಜು ಮೈದಾನದಲ್ಲಿ ಹಿಂಡುಹಿಂಡಾಗಿ ನಾಯಿಗಳ ಆರ್ಭಟ ಹೆಚ್ಚಾಗಿವೆ. ನಾಯಿಗಳ ನಿಯಂತ್ರಣ ಮಾಡುವಲ್ಲಿ ಕೊರಟಗೆರೆ ಪಪಂ ಸಂಪೂರ್ಣ ವಿಫಲವಾಗಿದೆ.

ಸಾರ್ವಜನಿಕರು ಹತ್ತಾರು ಸಲ ದೂರು ನೀಡಿದರೂ ಪಶು, ಆರೋಗ್ಯ ಅಥವಾ ಪಪಂ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ನಾಯಿಗಳ ಹಾವಳಿ ತಪ್ಪಿಸುವಂತೆ ಪಟ್ಟಣದ ಜನತೆ ತುಮಕೂರು ಜಿಲ್ಲಾಧಿಕಾರಿಗೆ ಆಗ್ರಹ ಮಾಡಿದ್ದಾರೆ.

Advertisement

ಜನರ ಕರೆಗೆ ಸೀಗದ ತುರ್ತುವಾಹನ

ಹುಚ್ಚುನಾಯಿ ದಾಳಿಯಿಂದ ತೀರ್ವ ಗಾಯಗೊಂಡ ವೃದ್ದರನ್ನು ಕೊರಟಗೆರೆ ಆಸ್ಪತ್ರೆಯಿಂದ ತುಮಕೂರಿಗೆ ರವಾನಿಸಲು ತುರ್ತುವಾಹನ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತುರ್ತುವಾಹನಕ್ಕೆ ಕರೆಮಾಡಿ 15ನಿಮಿಷ ಕಾದರು ಗ್ರಾಹಕಕೇಂದ್ರದ ಸಿಬಂದಿ ವರ್ಗ ತಡೆಹಿಡಿದು ತುರ್ತುವಾಹನ ಕಳಿಸದೇ ಗಾಯಾಳುಗಳಿಗೆ ಉಡಾಫೆ ಉತ್ತರ ನೀಡಿರುವ ಘಟನೆ ನಡೆದಿದೆ.

ಬೀದಿನಾಯಿ ಜನರ ಮೇಲೆ ಏಕಾಏಕಿ ದಾಳಿ ಮಾಡಿದ್ದು, ಕೊರಟಗೆರೆ ಪಟ್ಟಣದಲ್ಲಿ ಬೀದಿ ನಾಯಿಗಳ ಸಂತಾನೋತ್ಪತ್ತಿ ತಡೆಯಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಬೀದಿನಾಯಿಗಳ ಅಂಕಿ ಅಂಶದ ಸರ್ವೆ ನಡೆಸಬೇಕಿದೆ. ಪಪಂ ಮತ್ತು ಪಶು ಇಲಾಖೆ ಜಂಟಿಯಾಗಿ ಕಾರ್ಯಚರಣೆ ನಡೆಸಿ ನಾಯಿದಾಳಿ ತಡೆಯುತ್ತೇವೆ ಎಂದು ಕೊರಟಗೆರೆ ಪಪಂ.ಆರೋಗ್ಯಾಧಿಕಾರಿ ಮೊಹಮ್ಮದ್ ಹುಸೇನ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next