Advertisement

ಕೊರಟಗೆರೆ: ಕೆ.ಎಂ. ಮುನಿಯಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಲು ಒತ್ತಾಯ

07:06 PM Nov 05, 2022 | Team Udayavani |

ಕೊರಟಗೆರೆ: ಕೊರಟಗೆರೆ ವಿಧಾನಸಭೆಯಿಂದ ಸ್ಪರ್ಧಿಸಲು ಕೆ.ಎಂ. ಮುನಿಯಪ್ಪಗೆರವರಿಗೆ ಬಿ ಫಾರ್ಮ್ ನೀಡಬೇಕು ಎಂದು ಕೋಳಾಲ ಹೋಬಳಿಯ ಹುರುಳುಗೆರೆ ಹಾಗೂ ಸಿಂಗಳಿಪುರ ಮುಖಂಡರು,ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಮುನಿಯಪ್ಪರವರು ಕಳದೆ ನಾಲ್ಕು ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡಿಕೊಂಡು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ.ಕರೋನಾ ಕಾಲದಲ್ಲಿ ಪುಡ್ ಕಿಟ್,ಸ್ಯಾನಿಟೈಸರ್ ನೀಡಿದ್ದಾರೆ, ತಾಲೂಕಿನ ಹಲವು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದ್ದಾರೆ, ಗೋಶಾಲೆಗಳಿಗೆ ಮೇವು ವಿತರಣೆ, ಬಡಬಗ್ಗರಿಗೆ ಕಷ್ಟ ವೆಂದು ಬಂದವರಿಗೆ ಆಸ್ಪತ್ರೆ,ಮಕ್ಕಳ ವಿದ್ಯಾಬ್ಯಾಸ, ಅರ್ಥಿಕವಾಗಿ ನೆರವು , ತಾಲ್ಲೂಕಿನ ಹಲವು ಕಡೆ ಮನೆಯಿಲ್ಲದವರಿಗೆ ತಾತ್ಕಾಲಿಕವಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ,ಶಾಲೆಗಳ ಅಭಿವೃದ್ಧಿಗೂ ಸಹ ಕಾರಣರಾಗಿರುವ ಮುನಿಯಪ್ಪರಿಗೆ ಟಿಕೇಟ್ ನೀಡಬೇಕು,ನಾಲ್ಕೈದು ಮಂದಿ ಆಕಾಂಕ್ಷಿಗಳು ಬಿಜೆಪಿ ಪಕ್ಷದಲ್ಲಿ ದ್ದಾರೆ ಇದುವರೆಗೂ ಮುನಿಯಪ್ಪ ರನ್ನು ಬಿಟ್ಟು ಬೆರೆಯವರ ಮುಖವನ್ನು ಸಹ ನಾವು ನೋಡಿಲ್ಲ.ಮಹಿಳೆಯರ ಪರವಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಮುನಿಯಪ್ಪರವರಿಗೆ ಪಕ್ಷ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹುರುಳುಗೆರೆ,ಸಿಂಗಳಿಪುರ ಗ್ರಾಮಸ್ಥರು ಮುನಿಯಪ್ಪ ನವರಿಗೇ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.ನಿನ್ನೆಯಷ್ಟೇ ಮಧುಗಿರಿ ಜಿಲ್ಲಾ ಬಿಜೆಪಿ ಮುಖಂಡರು,ಕೊರಟಗೆರೆ ತಾಲ್ಲೂಕು ಮುಖಂಡರು ಪಕ್ಷದಿಂದ ಟಿಕೆಟ್ ಬಯಸಿರುವ ಆರು ಮಂದಿ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿರುವ ಬೆನ್ನಲ್ಲೆ ಕೋಳಾಲ ಹೋಬಳಿಯಲ್ಲಿ ಮೊದಲ ಬಾರಿಗೆ ಮಹಿಳೆಯರು ಕೆಲಸ ಮಾಡಿದವರಿಗೆ ಟಿಕೆಟ್ ನೀಡಿ ಎಂದು ಆಗ್ರಹಿಸಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಮುನಿಯಪ್ಪರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಿಸಲು ಬಿಜೆಪಿ ಮುಖಂಡರು ಮುಂದಾದರೆ ನಾವು ಬಿಜೆಪಿ ಪಕ್ಷದಿಂದ ದೂರಸರಿಯುವುದಾಗಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next