Advertisement

ಕೊರಟಗೆರೆ: ವಿದ್ಯಾರ್ಥಿಗಳ ನಡುವೆ ಗಲಾಟೆ; ಚಾಕುವಿನಿಂದ ಇರಿತ

06:51 PM Nov 16, 2022 | Team Udayavani |

ಕೊರಟಗೆರೆ: ಸರಕಾರಿ ಬಸ್ಸಿನಲ್ಲಿ ಮುಂದೆ ಹೋಗಲು ಹೇಳಿದ ವಿಚಾರಕ್ಕಾಗಿ ಗಲಾಟೆ ಮಾಡಿ ಚಾಕುವಿನಿಂದ ಇರಿದ ಪ್ರಕರಣ ನಡೆದಿದೆ.

Advertisement

ಹೊಳವನಹಳ್ಳಿಯ ವಾಸಿ ಇರ್ಷಾದ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಹಲ್ಲೆ ಮಾಡಿದ್ದು, ಇದೆ ಗ್ರಾಮದ ಕೊರಟಗೆರೆ ರವಿಂದ್ರ ಭಾರತಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಜಬಿವುಲ್ಲಾ ಹಲ್ಲೆಗೊಳಗಾದವನು. ಬಸ್ ತುಂಬಿದ ಕಾರಣ ನಿಲ್ಲಲು ಸಹ ಜಾಗವಿಲ್ಲದ ಕಾರಣ ಮುಂದೆ ಹೋಗಲು ಸೂಚಿಸಿದಕ್ಕೇ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಕೊರಟಗೆರೆ ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿದ್ದಾರೆ.ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ವಿದ್ಯಾರ್ಥಿಯಾದ ಇರ್ಷಾದ್ ನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡು ನಂತರ ರಾಜೀ‌ ಸಂಧಾನದ ಮುಖಾಂತರ ಬಗೆಹರಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಬಸ್ಸಿಗಾಗಿ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಈ ಹಿಂದೆ ಹಲವು ಬಾರಿ ಪತ್ರಿಕೆಯಲ್ಲಿ ಸುದ್ದಿ ಪ್ರಸರಣದವಾಗಿತ್ತು. ಇದರಿಂದ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next