Advertisement

ಕೊರಟಗೆರೆ:ರಾತ್ರಿ ಬೆಳೆಗೆ ನೀರು ಹಾಯಿಸಲು ಹೋದ ರೈತ ನಾಗರಹಾವು ಕಚ್ಚಿ ಸಾವು

09:42 PM Aug 17, 2022 | Team Udayavani |

ಕೊರಟಗೆರೆ: ರಾತ್ರಿ ವೇಳೆ ಮೆಣಸಿನ ಗಿಡಕ್ಕೆ ನೀರು ಹಾಯಿಸಲು ಹೋದ ರೈತನೂರ್ವ ಹಾವು ಕಡಿತಕ್ಕೊಳಗಾಗಿ ಸಾವನ್ನಪ್ಪಿರುವ ದುರ್ಘಟನೆ ಹೊಳವನಹಳ್ಳಿ ಹೋಬಳಿಯ ತೊಗರಿ ಘಟ್ಟ ಗ್ರಾಮದಲ್ಲಿ ನಡೆದಿದೆ.

Advertisement

ಟಿ.ವಿ ಗೋವಿಂದರಾಜ್ ( 37) ಸಾವಿಗೀಡಾದ ದುರ್ದೈವಿಯಾಗಿದ್ದು ಸೋಮವಾರ ರಾತ್ರಿ ಮೆಣಸಿನಕಾಯಿ ಗಿಡಕ್ಕೆ ನೀರಾಯಿಸಲು ಹೋದ ಸಂದರ್ಭ ರಾತ್ರಿ ಹಾವು ಕಚ್ಚಿದ್ದು, ಪ್ರತಿಕ್ಷಣ ಕಚ್ಚಿದ ಹಾವನ್ನು ಕಂಡು ನಾಗರಹಾವು ಆದ ಕಾರಣ ತೀರ ಭಯಗೊಂಡು ಸ್ನೇಹಿತರೊಂದಿಗೆ ಆಸ್ಪತ್ರೆಗೆ ಹೋದರಾದರೂ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.

ಡಾ.ಜಿ ಪರಮೇಶ್ವರ್ ಭೇಟಿ
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಹಾವು ಕಚ್ಚಿ ಸಾವಿಗೀಡಾದ ಟಿ.ವಿ ಗೋವಿಂದ್ ರಾಜ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿ ಸಹಾಯಧನ ನೀಡಿದ್ದಲ್ಲದೆ ಕೃಷಿ ಇಲಾಖೆಯಿಂದ ತ್ವರಿತವಾಗಿ 2 ಲಕ್ಷ ರೂ ವಿತರಿಸಲು ಕ್ರಮ ಕೈಗೊಳ್ಳಲಾಗುವುದುಎಂದು ತಿಳಿಸಿದ್ದಾರೆ. ಜತೆಗೆ ವಿಧವಾ ವೇತನ ವೇತನ ದೃಢೀಕರಣ ಪತ್ರವನ್ನು‌ ತಹಶೀಲ್ದಾರ್ ನಹೀದಾ ಜಮ್ ಜಮ್ ಸ್ಥಳದಲ್ಲಿಯೇ ವಿತರಿಸಿದರು.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ ಸುರೇಶ್ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next