Advertisement

ಕೊರಟಗೆರೆ : ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಮೂವರು ಅಂತರಾಜ್ಯ ಕಳ್ಳಿಯರ ಬಂಧನ

09:32 PM May 05, 2022 | Team Udayavani |

ಕೊರಟಗೆರೆ : ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಮೂರು ಮಂದಿ ಮಹಿಳೆಯರನ್ನು ವಶಕ್ಕೆ ಪಡೆದಿರುವ ಘಟನೆ ಕೊರಟಗೆರೆಯ ತಾಲೂಕಿನ ಎಸ್ಎಸ್ಆರ್ ಸರ್ಕಲ್ ನ ಬಸ್ ನಿಲ್ದಾಣದ ಬಳಿ ಬುಧವಾರ ರಾತ್ರಿ ನಡೆದಿದೆ.

Advertisement

ಕೊರಟಗೆರೆ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮಂಜುಳಾ ಮತ್ತು ಸಿಬ್ಬಂದಿಗಳಾದ ವೆಂಕಟೇಶ್ ಹಾಗೂ ಪ್ರದೀಪ್ ಕುಮಾರ್ ಬುಧವಾರ ರಾತ್ರಿ ಗಸ್ತಿನಲ್ಲಿರುವ ವೇಳೆ ಎಸ್ಎಸ್ಆರ್ ಸರ್ಕಲ್ ನ ಬಸ್ ನಿಲ್ದಾಣದ ಬಳಿ ಮೂವರು ಮಹಿಳೆಯರು ಪೊಲೀಸ್ ವಾಹನ ನೋಡಿ ಓಡಿದ್ದಾರೆ ಇದರಿಂದ ಅನುಮಾನಗೊಂಡ ಪೊಲೀಸರು ಮಹಿಳೆಯರನ್ನು ವಿಚಾರಣೆ ನಡೆಸಿದ್ದಾರೆ ಕಳ್ಳತನ ಕೃತ್ಯಕ್ಕೆ ಹೊಂಚು ಹಾಕಿರುವುದು ಬೆಳಕಿಗೆ ಬಂದಿದೆ. ಪರಿಣಾಮ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದವರನ್ನು ತಮಿಳುನಾಡು ಮೂಲದ ವೇಲೂರು ತಾಲ್ಲೂಕಿನ ಮೀನಾಕ್ಷಿ (35) ಶಾಂತಿ (30) ಮತ್ತು ವೆನ್ನೀಲಾ(22) ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಮಾರ್ಗದರ್ಶನದಲ್ಲಿ, ಪೊಲೀಸ್ ಠಾಣೆಯ ಪಿಎಸ್ಐ ಮಂಜುಳಾ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಮಂಗಳೂರು: ಭೂಖರೀದಿ ನೆಪದಲ್ಲಿ ಬಜಪೆಯ ವೃದ್ಧೆಗೆ 60 ಲ.ರೂ.ಗೂ ಮಿಕ್ಕಿ ವಂಚನೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next