Advertisement

ಹಾಡಹಗಲೇ ಕಳ್ಳರ ಕೈಚಳಕ: ಮನೆ ಬೀಗ ಮುರಿದು ಕುರಿ ಶೆಡ್ ಗಾಗಿ ಸಂಗ್ರಹಿಸಿಟ್ಟ ಹಣವನ್ನೇ ದೋಚಿದರು

08:01 PM Jul 30, 2022 | Team Udayavani |

ಕೊರಟಗೆರೆ : ಹಾಡ ಹಗಲೇ ಮನೆಯ ಬೀಗ ಒಡೆದು ಮನೆಯಲ್ಲಿದ್ದ 80 ಸಾವಿರ ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳವು ಮಾಡಿದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಾಲ್ಲೂಕಿನ ಬೈಚಾಪುರ ಗ್ರಾಮದ‌ ಬೈಚಾಪುರ ಕ್ರಾಸ್ ನ ವೆಂಕಟಶಾಮಯ್ಯ ಅವರ ಮಗ ನಾಗರಾಜಪ್ಪ ಎಂಬುವರ ಮನೆಯಲ್ಲಿ ಬೀಗ ಮುರಿದ ಕಳ್ಳರು ಕಳ್ಳತನ ನಡೆಸಿದ್ದಾರೆ.

ಕಳ್ಳರು ಪ್ರಮುಖ ರಾಜ್ಯ ಹೆದ್ದಾರಿ ಗೌರಿಬಿದನೂರು-ಬೈರೇನಳ್ಳಿ ಮಾರ್ಗದಿಂದ ತೊಂಡೆಬಾವಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಂತಿರುವ ಒಂಟಿ ಮನೆಯಲ್ಲಿ ಕಳ್ಳತನ ಮಾಡಿದ್ದು, ಸಾವಿರಾರು ಜನ ಓಡಾಡುವ ಪ್ರಮುಖ ರಸ್ತೆಯಲ್ಲಿ ಅದು ಹಾಡ ಹಗಲೇ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮನೆಯ ಕುಟುಂಬಸ್ಥರು ಜಮೀನಿನಲ್ಲಿ ಕೆಲಸಕ್ಕೆಂದು ಹೋಗಿದ್ದು ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿ ಮನೆಯ ಬಾಗಿಲ ಬೀಗವನ್ನು ಯಾವುದೋ ಕಬ್ಬಿಣ ಸಲಾಕೆಯಿಂದ ಮೀಟಿ ಒಳ ಹೊಕ್ಕ ಕಳ್ಳರು 80 ಸಾವಿರ ನಗದು ಹಾಗೂ ಇನ್ನಿತರೆ ಸಣ್ಣಪುಟ್ಟ ವಸ್ತುಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಬಾರಾಬಂಕಿ : ಬೈಕ್ ಗಳು ಢಿಕ್ಕಿಯಾದಾಗ ಟ್ರಕ್ ಹರಿದು ಐವರ ಸಾವು

Advertisement

ಕುರಿ ಶೆಡ್ ಮಾಡಲು ಕೂಡಿಟ್ಟ ಹಣ :
ನಾಗರಾಜಪ್ಪ ಅವರ ಮಗ ಬೆಂಗಳೂರಿನಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಊರಿನಲ್ಲಿ ಕುರಿ ಶೆಡ್ ಮಾಡಲೆಂದು ಒಂದೊಂದು ರೂಪಾಯಿ ಸೇರಿಸಿ 80 ಸಾವಿರ ಸಂಗ್ರಹಿಸಿ ಇಟ್ಟಿದ್ದರು ಆದರೆ ಅದು ಕಳ್ಳರ ಪಾಲಾಗಿದೆ, ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ ಮನೆಯಲ್ಲಿದ್ದ ಎರಡು ಬೆಳ್ಳಿ ದೀಪ ಕಂಬ, ಎರಡು ಬೆಳ್ಳಿ ಬಟ್ಟಲು ಒಂದು ಬೆಳ್ಳಿತಟ್ಟೆಯನ್ನು ಕಳ್ಳರು ಬಿಟ್ಟು ಹೋಗಿದ್ದು ಕೇವಲ ಹಣವನ್ನಷ್ಟೇ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next