Advertisement

Koratagere: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣ: ಮೂವರ ಬಂಧನ

10:13 PM Sep 30, 2024 | Team Udayavani |

ಕೊರಟಗೆರೆ: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿರುವ ಮೂವರು ಆರೋಪಿಗಳನ್ನು ಕೊರಟಗೆರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Advertisement

ತಾಲೂಕಿನ ಜಿ.ನಾಗೇನಹಳ್ಳಿ ಗ್ರಾಮದ ಬಳಿ ಆಂಧ್ರ ಮೂಲದ ಗುತ್ತಿ ಗ್ರಾಮದ ವಾಸಿ ಶಾಖಾವಲಿ ಅವರಿಗೆ ಚಿನ್ನ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಎರಡು ದಿನದಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಪುರದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ವ್ಯಾಪಾರಿ ರಾನಾ ಯುವರಾಜ( 22), ಕನ್ನೇಶ( 45), ರಾಜು ಬಾಬು(34) ಅವರನ್ನು ಬಂಧಿಸಿದ್ದು, ಸಂದಿಲ್‌ ತಲೆಮರೆಸಿಕೊಂಡಿದ್ದಾನೆ.

ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್‌ ವಶಪಡಿಸಿಕೊಳ್ಳಬೇಕಿದೆ. ಮೂರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

ಆರೋಪಿಗಳ ಕಡೆಯಿಂದ ಒಂದು ಹೋಂಡಾ ಶೈನ್‌ ಬೈಕ್‌, 5,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪತ್ತೆಗೆ ತುಮಕೂರು ಜಿಲ್ಲೆಯ ಎಸ್ಪಿ ಕೆ.ವಿ.ಅಶೋಕ್‌ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಅಬ್ದಲ್‌ ಖಾದರ್‌, ಕೊರಟಗೆರೆ ವೃತ್ತ ನಿರೀಕ್ಷಕ ಆರ್‌ಪಿ ಅನಿಲ್‌ ಅವರ ನೇತೃತ್ವದಲ್ಲಿ ಪಿಎಸ್‌ಐ ಚೇತನ್‌ಕುಮಾರ್‌ ಅವರ ತಂಡದ ಎಚ್‌.ಸಿ.ರಂಗರಾಜು, ಪೇದೆಗಳಾದ ದೊಡ್ಡಲಿಂಗಯ್ಯ, ಮೋಹನ್‌, ರಾಮಚಂದ್ರ ಗಣೇಶ್‌, ಪ್ರದೀಪ್‌ ಕುಮಾರ್‌ ಆರೋಪಿಗಳನ್ನು ಮಾಲು ಸಮೇತ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next