Advertisement

ಕೊರಟಗೆರೆ: ದಟ್ಟ ಪೊದೆ ಮಧ್ಯೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

08:10 PM Jul 28, 2022 | Team Udayavani |

ಕೊರಟಗೆರೆ : ತಾಲೂಕಿನ ಕೋಳಾಲ ಸಮೀಪದ ತಿಮ್ಮಸಂದ್ರ ಹೊರವಲಯದ ನಿರ್ಜನ ಪ್ರದೇಶದ ದಟ್ಟ ಪೊದೆ ಮಧ್ಯೆ ಅನುಮಾನಾಸ್ಪದವಾಗಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.

Advertisement

ಇದೇ ಗ್ರಾಮದ ಶಿವಕುಮಾರ್ (47) ಸಾವಿಗೀಡಾದ ದುರ್ದೈವಿಯಾಗಿದ್ದು, ಸೋಮವಾರ ಮಧ್ಯಾಹ್ನ ಮನೆಯಿಂದ ಹೋದವರು ಅಂದು ರಾತ್ರಿಯೇ ಈ ದುರ್ಘಟನೆ ಜರುಗಿರಬಹುದು ಎನ್ನಲಾಗಿದ್ದು, ಗುರುವಾರ ಬೆಳಗ್ಗೆ ಈ ಭಾಗದಲ್ಲಿ ಹೆಚ್ಚು ಕೊಳೆತು ಹೋದ ವಾಸನೆ ಬರುತ್ತಿರುವುದಾಗಿ ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ ನಂತರ ಕೊಳೆತ ಸ್ಥಿತಿಯಲ್ಲಿರುವ ಶವವನ್ನು ಪತ್ತೆ ಹಚ್ಚಲಾಗಿದೆ.

ತಾಲೂಕಿನ ಪುಣ್ಯಕ್ಷೇತ್ರ ಸೂರ್ಯಪುರಕ್ಕೆ ಹೋಗುವ ಮಾರ್ಗ ತಿಮ್ಮಸಂದ್ರ ಹಾಗೂ ಹುಲುವಂಗಲ ನಡುವಿನ ದಟ್ಟ ಪೊದೆಯ ಮುಧ್ಯೆ ಅನುಮಾನಾಸ್ಪದವಾಗಿ ಶಿವಕುಮಾರ್ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ್ದು, ಈ ಸಂಬಂಧ  ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸ್ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next