Advertisement

Koppal: ಪತ್ನಿಯನ್ನು ಹ*ತ್ಯೆಗೈದು ರಾತ್ರೋ ರಾತ್ರಿ ಸು*ಟ್ಟು ಹಾಕಿದ ಕ್ರೂರಿ ಗಂಡ!

09:52 PM Sep 08, 2024 | Team Udayavani |

ಕೊಪ್ಪಳ: ಪತ್ನಿ ಶೀಲ ಶಂಕಿಸಿ, ಮಕ್ಕಳಾಗಲಿಲ್ಲ ಎಂದು ತನ್ನ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಗಂಡ ರಾಕ್ಷಸಿ ಕೃತ್ಯ ಮೆರೆದ ಘಟನೆ ತಾಲೂಕಿನ ಅರಕೇರಿ ಗ್ರಾಮದಲ್ಲಿ ನಡೆದಿದೆ.

Advertisement

ಗೀತಾ ಹತ್ಯೆಯಾದ ದುರ್ದೈವಿ . ದೇವರೆಡ್ಡೆಪ್ಪ ಮಲ್ಲಾರೆಡ್ಡೆಪ್ಪ ಭಾವಿಕಟ್ಟಿ ಕೊಲೆಗೈದ ಪಾಪಿ. ಪತ್ನಿಯ ಶೀಲದ ಮೇಲೆ ಶಂಕಿಸಿ ಮಕ್ಕಳಾಗದ ಕಾರಣ ಅವಳೊಂದಿಗೆ ಜಗಳ ಮಾಡಿ ಸೆ.7 ರಂದು ತಡ ರಾತ್ರಿ ಸುಮಾರಿಗೆ  ಬೆಡ್ ರೂಮಿನಲ್ಲಿ ಕಟ್ಟಿಗೆಯಿಂದ ಮುಖಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ. ಬಳಿಕ  ಕುಟುಂಬದೊಂದಿಗೆ ಸೇರಿ ಕೊಲೆ ಮಾಡಿದ ವಿಷಯವನ್ನು ಮುಚ್ಚಿಟ್ಟು ರಾತ್ರೋ ರಾತ್ರಿ ಆಕೆಯ ಮೃತದೇಹ ಹೊಲದಲ್ಲಿ ಸುಟ್ಟು ಹಾಕಿದ್ದಾರೆ.

ಬೆಳಗ್ಗೆ ಕೊಲೆಯಾದ ಗೀತಾಳ ಮಾವ ಮಲ್ಲಾರಡ್ಡೆಪ್ಪ ಮೃತಳ ತಂದೆ, ತಾಯಿಗೆ ವಿಷಯ ತಿಳಿಸಿದ್ದಾರೆ. ಈ ಕೊಲೆ ಮಾಡಿದವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಎಂದು ಮೃತಳ ಸಹೋದರ ಸಿದರೆಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೊಲೆಗೈದ ಆರೋಪಿ ಹಾಗು ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next