Advertisement

ಕೊಪ್ಪಳ: ಎಸ್ ಪಿ ಮುಂದೆ ರೌಡಿಶೀಟರ್ ಗಳ ಪರೇಡ್

12:44 PM Jul 03, 2022 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಎಸ್ ಪಿ ಅರುಣಾಂಗ್ಷು ಗಿರಿ ಅವರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಸಿದರು.

Advertisement

ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಕೇಸ್ ಆಧಾರದ ಮೇಲೆ ಹಾಗು ಶಾಂತಿ ಭಂಗ ಮಾಡಿದ ವ್ಯಕ್ತಿಗಳನ್ನು ವಿಚಾರಣೆ ಮಾಡಿದ ಎಸ್ಪಿ ಅವರು ರೌಡಿಗಳ ಕಾರ್ಯ ಚಟುವಟಿಕೆ ವಿಚಾರಿಸಿದರು.

ಆಮ್ ಆದ್ಮಿ ಪಾರ್ಟಿಯ ಕೊಪ್ಪಳ ತಾಲೂಕು ಅಧ್ಯಕ್ಷ ಸಹ ರೌಡಿ ಶೀಟರ್ ಆಗಿದ್ದು ‘ನೀನು ಬಟ್ಟೆ ವ್ಯವಹಾರ ಮಾಡಿಕೊಂಡು ಜೀವನ ನಡೆಸುವುದು ಬಿಟ್ಟು ಬೇರೆಲ್ಲಾ ಕೆಲಸ ಮಾಡ್ತಿಯಾ, ನಿನ್ನ ಮೇಲೆ 15 ಕೇಸ್ ಇವೆ. ನೀನು ಲಗೇಜ್ ರಡಿ ಮಾಡ್ಕೊ’ ಎಂದು ಗಡಿಪಾರಿನ ಸೂಚನೆ ನೀಡಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ನಾಂದಿ ಹಾಡಿದ ರೂಪಾಲಿ

ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿನ ಎಲ್ಲ ರೌಡಿ ಶೀಟರ್ ಗಳ ವಿಚಾರಣೆಯು ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next