Advertisement

ಆನೆಗುಂದಿ ಪಂಪಾ ಸರೋವರ, ಆದಿಶಕ್ತಿ ದೇಗುಲಕ್ಕೆ ಸಚಿವ ಶ್ರೀರಾಮುಲು ಭೇಟಿ

04:38 PM Sep 26, 2021 | Team Udayavani |

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ವಾಲಿಕಿಲ ಆದಿಶಕ್ತಿ ದೇಗುಲ ಮತ್ತು ಇತಿಹಾಸ ಪ್ರಸಿದ್ಧ ಪಂಪಾ ಸರೋವರಕ್ಕೆ ಸಚಿವ ಬಿ ಶ್ರೀರಾಮುಲು ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು.

Advertisement

ಆದಿಶಕ್ತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶ್ರೀರಾಮುಲು ಅವರು ಇಲ್ಲಿರುವ ಗೋಶಾಲೆಗೆ ಭೇಟಿ ನೀಡಿ ಗೋವುಗಳಿಗೆ ಮೇವು ತಿನ್ನಿಸಿ  ಪೂಜೆ ಸಲ್ಲಿಸಿದರು .

ಇದಕ್ಕೂ ಮೊದಲು ಪಂಪಾ ಸರೋವರಕ್ಕೆ ಭೇಟಿ ನೀಡಿ ಶ್ರೀ ವಿಜಯಲಕ್ಷ್ಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಸರೋವರದ ಮೀನುಗಳಿಗೆ ಆಹಾರ ನೀಡಿದರು.

ಇದನ್ನೂ ಓದಿ:ವೈಟ್-ವೆಸ್ಟಿಂಗ್‍ಹೌಸ್‍ನಿಂದ ಟಾಪ್ ಮತ್ತು ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಬಿಡುಗಡೆ

ಈ ಸಂದರ್ಭದಲ್ಲಿ ಸಚಿವ ಬಿ ಶ್ರೀರಾಮುಲು ಮಾತನಾಡಿ ವಾಲಿಕಿಲ್ಲಾ ಆದಿಶಕ್ತಿ ದೇಗುಲ ಜೀರ್ಣೋದ್ಧಾರ ಮತ್ತು ಪುನರ್ ನಿರ್ಮಾಣಕ್ಕಾಗಿ ವೈಯಕ್ತಿಕ ಮತ್ತು ಸರ್ಕಾರದ ಅನುದಾನವನ್ನು ಮಂಜೂರಿ ಮಾಡಿಸಲಾಗುತ್ತದೆ .ಗೋಶಾಲೆಗೆ ಇನ್ನಷ್ಟು ಮೂಲ ಸೌಕರ್ಯಗಳನ್ನು ಒದಗಿಸಿ ಇನ್ನಷ್ಟು ಗೋವುಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ ಎಂದರು.

Advertisement

ಮುಖಂಡರಾದ ಕೆಲೋ ಜಿ ಸಂತೋಷ್ ,ಅರ್ಚಕ ಬ್ರಹ್ಮಯ್ಯಸ್ವಾಮಿ ,ರಾಜಣ್ಣ, ಗೋವರ್ಧನ್ ರಾಜು ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next