Advertisement

ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಢಿಕ್ಕಿ: ಡಿಎಸ್‌ಎಸ್ ಮುಖಂಡ ಸೇರಿ ಇಬ್ಬರು ಸಾವು

10:26 PM Nov 12, 2022 | Team Udayavani |

ಕೊಪ್ಪಳ: ನಗರ ಹೊರ ವಲಯದ ಪಂಚಮಸಾಲಿ ಸಮುದಾಯ ಭವನದ ಬಳಿ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದ್ದು, ಮೃತರನ್ನು ಡಿಎಸ್‌ಎಸ್ ರಾಜ್ಯ ಸಂಚಾಲಕ ಶರಣಪ್ಪ ಲೇಬಗೇರಿ ಹಾಗೂ ಅಶೋಕ ಎಂದು ತಿಳಿದು ಬಂದಿದೆ.

Advertisement

ಮೃತರು ಇಬ್ಬರು ಕೊಪ್ಪಳದಿಂದ ಲೇಬಗೇರಿ ಗ್ರಾಮಕ್ಕೆ ಶನಿವಾರ ಸಂಜೆ 7 ಗಂಟೆ ವೇಳೆಗೆ ಬೈಕ್‌ನಲ್ಲಿ ತೆರಳುವ ವೇಳೆ ಪಂಚಮಸಾಲಿ ಸಮುದಾಯ ಭವನದ ಸಮೀಪದಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಗುದ್ದಿದ್ದಾರೆ.

ಇವರ ದ್ವಿಚಕ್ರ ವಾಹನ ರಭಸವಾಗಿ ಬಂದು ಟ್ರ್ಯಾಕ್ಟರ್‌ಗೆ ಗುದ್ದಿದ ಪರಿಣಾಮ ಇಬ್ಬರು ತೀವ್ರ ರಕ್ತಸ್ರಾವದಿಂದ ಬಳಲಿದ್ದಾರೆ. ತಲೆ ಹಾಗೂ ಮುಖಕ್ಕೆ ತೀವ್ರ ಪೆಟ್ಟಾದ ಹಿನ್ನೆಲೆಯಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ಒರ್ವ ಮಹಿಳೆ ಸಾವು, 9 ಜನರಿಗೆ ಗಂಭೀರ ಗಾಯ

Advertisement

Udayavani is now on Telegram. Click here to join our channel and stay updated with the latest news.

Next