Advertisement

ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಕಾಪಾಡದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ

02:11 PM Apr 21, 2020 | keerthan |

ಕೊಪ್ಪಳ: ಸರ್ಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡಿ ಎಂದು ಪದೇ ಪದೇ ಹೇಳುತ್ತಿದೆ. ಆದರೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಬಡ ಕುಟುಂಬಕ್ಕೆ ಪಡಿತರ ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರವೇ ಕಾಣಲಿಲ್ಲ.

Advertisement

ಶಾಸಕರು ಕೊಪ್ಪಳದ ನಿವಾಸಿಗಳಿಗೆ ಸುಮಾರು3 ಸಾವಿರ ಕಿಟ್ ಸಿದ್ದಪಡಿಸಿದ್ದಾರೆ. ಮಂಗಳವಾರ ತಮ್ಮ ಕಚೇರಿಯಿಂದ ಬಡ ಕುಟುಂಬಕ್ಕೆ ಕಿಟ್ ವಿತರಣೆಗೆ ಸಾಂಕೇತಿಕ ಚಾಲನೆ ನೀಡಿದರು‌.

ಪ್ರತಿ ವಾರ್ಡಿನಲ್ಲಿ ಕೆಲವು ಕುಟುಂಬ ಗುರುತು ಮಾಡಿದ್ದು ಕಿಟ್ ಸಿದ್ದಪಡಿಸಿ ವಾಹನಗಳಲ್ಲಿ ಮನೆ ಮನೆಗೆ ವಿತರಣೆ ಮಾಡುವ ವ್ಯವಸ್ಥೆ ಮಾಡಿದ್ದರು. ಕೆಲವು ಕುಟುಂಬಕ್ಕೆ ತಮ್ಮ ಕಚೇರಿಯಲ್ಲಿಯೇ ಸಾಂಕೇತಿಕ ಕಿಟ್ ವಿತರಣೆ ಮಾಡಿದರು. ಆದರೆ ಸಮಾಜಿಕ ಅಂತರ ಇರಲಿಲ್ಲ. ಅವರ ಆಪ್ತರು ಸಾಮಾಜಿಕ ಅಂತರ ಇರಲಿ ಎಂದರೂ ಯಾರೂ ಪಾಲನೆ ಮಾಡಲೇ ಇಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next