Advertisement

ಸರ್ವಧರ್ಮಗಳ ಏಕತೆಗಾಗಿ ದ್ವಾದಶ ಜ್ಯೋತಿರ್ಲಿಂಗ ದರ್ಶನಕ್ಕೆ ಶಿವಭಕ್ತನ ಪಾದಯಾತ್ರೆ

04:25 PM Nov 26, 2020 | sudhir |

ಕುಷ್ಟಗಿ: ಗುಜರಾತಿನ ಶಿವಭಕ್ತನೊಬ್ಬ ಜೀವನ್ಮುಕ್ತಿ, ಸರ್ವಧರ್ಮಗಳ ಏಕತೆಗಾಗಿ ದ್ವಾದಶ ಜ್ಯೋತಿರ್ಲಿಂಗ ದರ್ಶನಕ್ಕೆ ಪಾದಯಾತ್ರೆ ಸೇವೆ ಕೈಗೊಂಡಿದ್ದಾನೆ. ಗುಜರಾತ್‌ನ ಅಂಬ್ರೇಲಿ ಜಿಲ್ಲೆಯ ಜಾಪ್ರಾಬಾದ್‌ ತಾಲೂಕಿನ ಕಾಗದಾರ್‌ ಗ್ರಾಮದ 48ರ ವಯೋಮಾನದ ಬಾಬು ಪ್ರಜಾಪತಿ ಈ ಶಿವಭಕ್ತ. ಕಳೆದ ಸೆ. 18ರಿಂದ ಪಾದಯಾತ್ರೆ ಆರಂಭಿಸಿದ್ದಾನೆ. ಈಗಾಗಲೇ ಗುಜರಾತಿನ
ಎರಡು, ಮಧ್ಯಪ್ರದೇಶದ ಎರಡು, ಮಹಾರಾಷ್ಟ್ರ 3 ಜ್ಯೋತಿರ್ಲಿಂಗಗಳ ದರ್ಶನ ಪಾದಯಾತ್ರೆ ಪೂರೈಸಿದ್ದು, ಇನ್ನೂ 5 ಜ್ಯೋತಿರ್ಲಿಂಗಳ ದರ್ಶನಕ್ಕೆ ಕುಷ್ಟಗಿ ಮೂಲಕ ಹೊರಟಿದ್ದಾನೆ.

Advertisement

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುಣ್ಯ ಪ್ರಾಪ್ತಿ ಹಾಗೂ ಸರ್ವಧರ್ಮಗಳ ಏಕತೆಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದು, ದಿನವೂ 40ರಿಂದ 45 ಕಿ.ಮೀ. ಬಿಡುವಿಲ್ಲದೇ ನಡೆಯುತ್ತಿದ್ದು, ದಾರಿ ಮಧ್ಯೆ ನೀಡುವ ಕಾಣಿಕೆಯಿಂದ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿದೆ ಎಂದರು.

ಇದನ್ನೂ ಓದಿ:ಮಕ್ಕಳ ಪೌಷ್ಟಿಕತೆಗೆ “ಸಾವಯವ ನುಗ್ಗೆ ಪೌಡರ್‌’ : ಕೊಪ್ಪಳ ಜಿಲ್ಲಾಡಳಿತದ ಹೊಸ ಪ್ರಯೋಗ

Advertisement

Udayavani is now on Telegram. Click here to join our channel and stay updated with the latest news.

Next